ಲೇಖಕ: Siddaiah C
-
ವಾರದಲ್ಲಿ 70 ಗಂಟೆಗಳ ಕೆಲಸ: ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ
‘ವಾರಕ್ಕೆ 70 ಗಂಟೆ ಕೆಲಸ’ದ ವಿಷಯ ಚರ್ಚೆ ಮತ್ತೆ ಬಂದಿದೆ. ಈ ಬಾರಿ ಓಲಾ ಸಿಇಒ ಭವಿಶ್ ಅಗರ್ವಾಲ್ ಈ ಚರ್ಚೆಗೆ ನಾಂದಿ ಆಡಿದ್ದಾರೆ. ಮುಂದುವರಿದ ಆರ್ಥಿಕತೆಗಳೊಂದಿಗೆ ಸ್ಪರ್ಧಿಸಲು ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ. ನಂತರದ ಬೆಳವಣಿಗೆಯಲ್ಲಿ ಕರ್ನಾಟಕ ಸರ್ಕಾರವು ಐಟಿ ವಲಯದಲ್ಲಿ ದಿನದ ಕೆಲಸದ ಅವಧಿಯನ್ನು 14 ಗಂಟೆಗೆ ಹೆಚ್ಚಿಸುವ ಚಿಂತನೆ ನಡೆಸುತ್ತಿದೆ. ಕಾರ್ಮಿಕರು ಮತ್ತು ನೌಕರರ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ಉದ್ಯಮಿಗಳು ಗಣನೆಗೆ…
-
PSU Privatisation: ಸಾರ್ವಜನಿಕ ಉದ್ಯಮಗಳ ಮಾರಾಟ:
ಕಳೆದ 9 ವರ್ಷಗಳಲ್ಲಿ ರೂ. 4.07 ಲಕ್ಷ ಕೋಟಿ ಬಂಡವಾಳ ಹಿಂತೆಗೆತ “ಪೂರ್ವಿಕರು ಕಷ್ಟಪಟ್ಟು ಕಟ್ಟಿ, ಬೆಳೆಸಿ, ಉಳಿಸಿಕೊಂಡು ಬಂದಿದ್ದ ಆಸ್ತಿಪಾಸ್ತಿಗಳನ್ನು ಮಾರಾಟ ಮಾಡಿ ಮನೆ ನಡೆಸುವ ಮಗನನ್ನು ಏನೆಂದು ಕರೆಯುತ್ತೇವೆ? ಮನೆಹಾಳ ಅಥವಾ ಕೇಡುಗ ಅನ್ನುತ್ತೇವೆ. ಹಾಗೇನೇ ಪೂರ್ವಿಕರು ಕಟ್ಟಿ, ಬೆಳೆಸಿ, ಉಳಿಸಿಕೊಂಡು ಬಂದಿದ್ದ ದೇಶದ ಸಂಪತ್ತನ್ನು ಮಾರಾಟ ಮಾಡುತ್ತಾ ‘ದೇಶವನ್ನು ನಡೆಸುವವ’ನನ್ನು ಏನೆನ್ನಬೇಕು? ಮಹಾನ್ ಮನೆ ಹಾಳ ಅಥವಾ ಮಹಾಕೇಡುಗ ಅನ್ನಬೇಕಾಗುತ್ತದೆ.” ದೇವನೂರು ಮಹಾದೇವ ಅವರ ಈ ಮಾತುಗಳನ್ನು ನೆನಪಿಸಿಕೊಳ್ಳುತ್ತ, ಮೋದಿ ಆಡಳಿತದಲ್ಲಿ ‘ಬಂಡವಾಳ…
-
14.56 ಲಕ್ಷ ಕೋಟಿ ರೈಟ್ಆಫ್: 20 ಲಕ್ಷ ಕೋಟಿಗೂ ಹೆಚ್ಚು NPA
ಮೋದಿ ಸರ್ಕಾರದ 10 ವರ್ಷಗಳ ಸಾಧನೆಗಳಲ್ಲಿ ಬ್ಯಾಂಕುಗಳಲ್ಲಿ ಸಾರ್ವಜನಿಕರ ಸಂಪತ್ತನ್ನು ಲೂಟಿ ಮಾಡಲು ದೊಡ್ಡ ಉದ್ಯಮಿಗಳಿಗೆ ಮುಕ್ತ ಅವಕಾಶ ಕೊಟ್ಟಿರುವುದೂ ಒಂದು ಸಾಧನೆ. ಆದರೆ, ಅವರ ಸಾಧನೆಗಳ ಪ್ರಚಾರದ ಪಟ್ಟಿಯಲ್ಲಿ ಈ ಅಂಶ ಸೇರಿಸಿಲ್ಲ. 2014-15 ರಿಂದ 2021-22ರ 8 ವರ್ಷಗಳ ಅವಧಿಯಲ್ಲಿ 12,49,698 ಕೋಟಿ ರೂಗಳ ಸಾಲ ರೈಟ್ ಆಫ್ (write off) ಮಾಡಲಾಗಿತ್ತು. 2022-23ರ ಆರ್ಥಿಕ ವರ್ಷದ ಮೊದಲ 9 ತಿಂಗಳ ಅವಧಿಯಲ್ಲಿ 91,000 ಕೋಟಿ ಸಾಲ ರೈಟ್ ಆಫ್ ಮಾಡಲಾಗಿದೆ ಎಂದು ರಾಜ್ಯಸಭೆಗೆ…
-
ಸಂಪತ್ತಿನ ಅಸಮಾನತೆಯನ್ನು ಬಹಿರಂಗಪಡಿಸಿದ ಅಂಬಾನಿ ಮಗನ ಮದುವೆ
ಪಡಿತರದ ಮೂಲಕ ತಿಂಗಳಿಗೆ 5 ಕೆಜಿ ಉಚಿತ ಧಾನ್ಯಗಳನ್ನು ಪಡೆಯುತ್ತಿರುವ 80 ಕೋಟಿ ಜನರಿರುವ ದೇಶದಲ್ಲಿ, 5,000 ಕೋಟಿ ರೂ. ವೆಚ್ಚ ಮಾಡಿ ಅಂಬಾನಿ ಕುಟುಂಬ ತನ್ನ ಮಗನ ಮದುವೆ ಮಾಡಿದೆ. ಕೆಲವರು ಇದನ್ನು ‘ಕಷ್ಟಪಟ್ಟು ಗಳಿಸಿದ ಹಣವನ್ನು ಈ ರೀತಿ ಖರ್ಚುಮಾಡುವುದು ತಪ್ಪೇನೂ ಅಲ್ಲ ಎನ್ನುತ್ತಾರೆ, ಮತ್ತೆ ಕೆಲವರು ಇದನ್ನು ಭಾರತದಲ್ಲಿ ಬೆಳೆಯುತ್ತಿರುವ ಅಸಮಾನತೆಯ ಸಂಕೇತವಾಗಿ ಕಾಣುತ್ತಾರೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕೆಲವರು ಮಾತ್ರ ಅತ್ಯಧಿಕ ಸಂಪತ್ತನ್ನು ಗಳಿಸಲು ಅವಕಾಶ ಮತ್ತು ಬಹುಸಂಖ್ಯಾತ ಜನರು ಕಡು ಬಡತನದಲ್ಲಿರಲು…
-
ಪಿಎಂ ಫಸಲ್ ಭೀಮಾ ಯೋಜನೆ: ರೈತರಿಗಿಂತ ವಿಮಾ ಕಂಪನಿಗಳಿಗೇ ಹೆಚ್ಚು ಲಾಭ
ಕಳೆದ 10 ವರ್ಷಗಳ ಮೋದಿ ಆಡಳಿತದಲ್ಲಿ ರೂಪಿಸಿ ಜಾರಿಗೆ ತರಲಾದ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಒಂದು. ಕೃಷಿ ವಿಮಾ ಯೋಜನೆಯನ್ನು ಖಾಸಗಿ ವಿಮಾ ಕಂಪನಿಗಳಿಗೂ ತೆರೆದಿಟ್ಟಿದೆ. ಈ ಯೋಜನೆ ರೈತರ ಲಾಭಕ್ಕಿಂತ ಖಾಸಗಿ ವಿಮಾ ಕಂಪನಿಗಳಿಗೇ ಹೆಚ್ಚು ಲಾಭ ತಂದುಕೊಡುತ್ತಿದೆ. ದಾಖಲೆಗಳ ಮೇಲಷ್ಟೇ ಈ ಯೋಜನೆಯು ರೈತ ಸ್ನೇಹಿ ಎಂಬ ಚಿತ್ರವನ್ನು ಪ್ರಸ್ತುತಪಡಿಸುತ್ತದೆ. ಆದರೆ ವಾಸ್ತವದಲ್ಲಿ ಆ ರೀತಿಯಲ್ಲಿ ಇಲ್ಲ. ಇತ್ಯರ್ಥ/ಹಕ್ಕುಗಳ ಸ್ವೀಕೃತಿಯಲ್ಲಿ ವಿಳಂಬ ಮತ್ತು ತಾಂತ್ರಿಕ ದೋಷಗಳಂತಹ ಅನೇಕ ಸಮಸ್ಯೆಗಳನ್ನು…
-
ಚುನಾವಣಾ ಬಾಂಡ್: ಬಿಜೆಪಿಗೆ ಬಂದ ಹಣ 9,200 ಕೋಟಿ ರೂ
ಬಿಜೆಪಿ ಪಕ್ಷಕ್ಕೆ ಹರಿದು ಬರುತ್ತಿರುವ ಚುನಾವಣಾ ನಿಧಿ ಎಷ್ಟು? ಆ ನಿಧಿಯ ಮೂಲ ಯಾವುದು? ಬಿಜೆಪಿ ಒಂದೆಡೆ ‘ಪಿಎಂ ಕೇರ್ ನಿಧಿ’ ಹೆಸರಿನಲ್ಲಿ ಸಂಗ್ರಹಿಸಿದ ಹಣ ಮತ್ತು ಅದನ್ನು ಯಾವುದಕ್ಕೆ ಬಳಸಲಾಗುತ್ತದೆ ಎಂಬ ವಿವರಗಳನ್ನು ಸಾರ್ವಜನಿಕರಿಂದ ಮುಚ್ಚಿಡುತ್ತದೆ. ಮತ್ತೊಂದಡೆ, ‘ಚುನಾವಾಣಾ ಬಾಂಡ್’ ಗಳ ಮೂಲಕ ಪಕ್ಷದ ನಿಧಿಗೆ ಯಾವ ಮೂಲದಿಂದ ಮತ್ತು ಎಷ್ಟು ಹಣ ಬಂದಿದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಲು ನಿರಾಕರಿಸುತ್ತಿದೆ. ದೇಣಿಗೆ ಪಡೆಯುವ ಹಕ್ಕು ರಾಜಕೀಯ ಪಕ್ಷಗಳಿಗಿದ್ದರೆ, ಅದನ್ನು ಯಾರು ಕೊಟ್ಟರು ಎಂದು ತಿಳಿಯುವ ಹಕ್ಕು…
-
‘ಸನಾತನ ಧರ್ಮ’ ಎಂದರೆ ಯಾವುದು?
ಪುರೋಹಿತರು ಬಂದಿದ್ದು ಸತ್ಯನಾರಾಯಣ ಪೂಜೆ ಮಾಡಲು:ಮಾಡಿದ್ದು ‘ಸನಾತನ ಧರ್ಮ ಉಳಿಸಲು ಮತ ಹಾಕಿ’ ಎಂಬ ಚುನಾವಣಾ ಭಾಷಣ!! ಮಾಡಿದ್ದು ‘ಸನಾತನ ಧರ್ಮ ಉಳಿಸಲು ಮತ ಹಾಕಿ’ ಎಂಬ ಚುನಾವಣಾ ಭಾಷಣ!! ಭಾರತದಲ್ಲಿ ಇಂದು ಹಿಂದುತ್ವ ಶಕ್ತಿಗಳು ಅಧಿಕಾರದಲ್ಲಿವೆ. ಇವರು ಹೆಸರಿಗೆ ಮಾತ್ರ ಸಂವಿಧಾನಕ್ಕೆ ನಿಷ್ಠರಾಗಿರುತ್ತೇವೆ ಎಂದು ಪ್ರತಿಜ್ಞೆ ಮಾಡಿದರೂ, ವಾಸ್ತವದಲ್ಲಿ ಮನುವಾದವೇ ಇವರಿಗೆ ಹೆಚ್ಚು ಮಹತ್ವದ್ದಾಗಿದೆ. ಸನಾತನ ಧರ್ಮ ಎಂದರೆ ಅವರ ದೃಷ್ಟಿಯಲ್ಲಿ ಮನುಧರ್ಮ. ಮನುಧರ್ಮ ಎಂದರೆ ಚಾತುರ್ವರ್ಣ ಪದ್ದತಿ. ಸನಾತನದ ಬಗ್ಗೆ ಇಸ್ಕಾನ್ ಆಂದೋಲನವು ತನ್ನ…
-
ಪೇಟಿಎಂ ಕುಸಿತ: ಹೂಡಿಕೆದಾರರ 15,000 ಕೋಟಿ ರೂ. ಕಣ್ಮರೆ
ನರೇಂದ್ರ ಮೋದಿಯವರ 10 ವರ್ಷಗಳ ಆಡಳಿತದ ಅಂತ್ಯದಲ್ಲಿ ಮತ್ತೊಂದು ಮೆಘಾ ಹಗರಣ ಬೆಳಕಿಗೆ ಬಂದಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ಪರವಾನಗಿಯನ್ನು ರದ್ದುಪಡಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ರಿಸರ್ವ್ ಬ್ಯಾಂಕ್ ಈಗಾಗಲೇ ಹೊಸ ಗ್ರಾಹಕರನ್ನು ಸೇರಿಸಲು ನಿರ್ಬಂಧ ಮತ್ತು ಹಾಲಿ ಗ್ರಾಹಕರಿಂದ ಹಣ ಪಡೆಯುವುದನ್ನು ನಿಷೇಧಿಸುವ ಅನೇಕ ನಿರ್ಬಂಧಗಳನ್ನು ವಿಧಿಸಿದ್ದರೆ, ಆ ಕಂಪನಿಯ ಸಂಸ್ಥಾಪಕ ಮತ್ತು ಅದರ ದೊಡ್ಡ ಷೇರುದಾರರಾಗಿರುವ ಉತ್ತರ ಪ್ರದೇಶದ ವಿಜಯ್ ಶೇಖರ್ ಶರ್ಮಾ ಅವರು ಕಂಪನಿಯ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ. ಆರ್ಬಿಐ ಒತ್ತಾಯದ…
-
‘ಕಿಸಾನ್ ಸಮ್ಮಾನ್’ ಮರೆಯಲ್ಲಿವೆ ಮುಕ್ತ ಮಾರುಕಟ್ಟೆ ವ್ಯವಸ್ಥೆಯ ಜಾರಿಗೆ ಉನ್ನಾರಗಳು
“ನರೇಂದ್ರ ಮೋದಿಯವರು ‘ಕಿಸಾನ್ ಸಮ್ಮಾನ್’ ಯೋಜನೆಯ ಮೂಲಕ ರೈತರ ಖಾತೆಗೆ ಪ್ರತಿ ವರ್ಷ 6,000 ರೂ. ಹಾಕುತ್ತಿದ್ದಾರೆ. ಇದರಿಂದ ರೈತರ ಆದಾಯ ಹೆಚ್ಚಾಗಿದೆ. ಇದು ರೈತರ ಆರ್ಥಿಕ ಅಗತ್ಯಗಳನ್ನು ಪೂರೈಸಲು ಕಾರಣವಾಗಿದೆ. ರೈತರಿಗೆ ವರ್ಷಕ್ಕೆ 60 ಸಾವಿರ ಕೋಟಿ ರೂಪಾಯಿಗಳನ್ನು ಮೋದಿ ಸರ್ಕಾರ ಕೊಡುತ್ತಿದೆ. 2022-23 ರಲ್ಲಿ ಒಟ್ಟು ರೂ. 58,201.85 ಕೋಟಿಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗಿದೆ. ಯೋಜನೆ ಪ್ರಾರಂಭವಾದಾಗಿಂದ 2023 ರ ಜುಲೈ ವರೆಗೆ 11 ಕೋಟಿಗೂ ಹೆಚ್ಚು ರೈತರಿಗೆ 2.60 ಲಕ್ಷ ಕೋಟಿ ರೂ.ಗಳನ್ನು…
-
‘ಭಾರತ್ ರೈಸ್’ ಹೆಸರಿನಲ್ಲಿ ಅಕ್ಕಿ ಮಾರಾಟ: ಮುಚ್ಚಿಟ್ಟಅಜೆಂಡಾಗಳು
ಒಂದೆಡೆ, ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಡಿತರ ಧಾನ್ಯಗಳ ಬದಲಿಗೆ ನೇರ ನಗದು ಯೋಜನೆ ಮೂಲಕ ಫಲಾನುಭವಿಗಳ ಖಾತೆಗೆ ಹಣ ಹಾಕುತ್ತಾರೆ. ಮತ್ತೊಂದೆಡೆ, ಆಹಾರ ಧಾನ್ಯಗಳ ಬೆಲೆ ಏರಿಕೆಯಿಂದ ಜನರನ್ನು ರಕ್ಷಿಸುವ ಉದ್ದೇಶದಿಂದ ಕಡಿಮೆ ದರದಲ್ಲಿ ಭಾರತ್ ರೈಸ್ ಹೆಸರಿನಲ್ಲಿ ಕೆಜಿ ಅಕ್ಕಿಗೆ 29 ರೂ.ನಂತೆ ಮಾರಾಟ ಮಾಡಲಾಗುತ್ತಿದೆ ಎಂದು ಮೋದಿ ಸರ್ಕಾರ ಹೇಳುತ್ತಿದೆ. ಏನಿದು ನಾಟಕ? ಒಂದು ವೇಳೆ ಧಾನ್ಯಗಳ ಬೆಲೆ ಏರಿಕೆಯಿಂದ ಜನರನ್ನು ರಕ್ಷಣೆ ಮಾಡಬೇಕು ಎಂಬುದೇ ಅವರ ನಿಜವಾದ ಖಾಳಜಿಯಾಗಿದ್ದರೆ, ‘ಭಾರತ್ ಅಕ್ಕಿ’ ಹೆಸರಿನಲ್ಲಿ…