ಲೇಖಕ: Siddaiah C

  • ಸಾಮ್ರಾಟ್ ಅಶೋಕ ಗಾರ್ಮೆಂಟ್ ಕಾರ್ಮಿಕರ ಹೋರಾಟ

    ನಗರದಲ್ಲಿ 22 ಕಾರ್ಖಾನೆ ಹೊಂದಿರುವ ಸುಮಾರು ಏಳು ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿರುವ ಅಶೋಕ ಸಾಮ್ರಾಟ್ ಸಿದ್ದ ಉಡುಪು (EK ಗಾರ್ಮೆಂಟ್ಸ್) ಕಾರ್ಖಾನೆಯ ಕಾರ್ಮಿಕರು ತಮ್ಮ ಹೋರಾಟವನ್ನು ತೀರ್ವಗೊಳಿಸಿದ್ದಾರೆ. 1996ರ ಮಾರ್ಚ್ 15 ರಂದು ಸಿಐಟಿಯು ಸಂಯೋಜಿತ ಬೆಂಗಳೂರು ಜಿಲ್ಲಾ ಗಾರ್ಮೆಂಟ್ಸ್ ವರ್ಕರ್ಸ್ ಯೂನಿಯನ್ನಿನ ಅಧ್ಯಕ್ಷರು ಹಾಗೂ ಸಿಐಟಿಯು ಜಿಲ್ಲಾ ಮುಖಂಡರಾದ ಆರ್. ಶ್ರೀನಿವಾಸ್ ವಿಧಾನಸೌಧದ ಎದುರು ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸುವುದರ ಮೂಲಕ ಹೋರಾಟವನ್ನು ತೀರ್ವಗೊಳಿಸಿದರು. ಕನಿಷ್ಠ ಸೌಲಭ್ಯವಿಲ್ಲ ಶೇಕಡ 95 ರಷ್ಟು ಮಹಿಳೆಯರೇ ಇರುವ…

  • ಮೈಕೊ ಕಾರ್ಮಿಕರ 1979ರ ಐತಿಹಾಸಿಕ ಹೋರಾಟ

    (2002ರಲ್ಲಿ ಬಿಡುಗಡೆಯಾದ ನನ್ನ ಕಿರು ಪುಸ್ತಕದ ಪೂರ್ಣ ಬರಹ ಇಲ್ಲಿದೆ.) ಬೆಂಗಳೂರು  ನಗರದಲ್ಲಿ ಬೃಹತ್ ಖಾಸಗಿ ಕಂಪನಿಯಾದ ‘ಮೈಕೋ’ (MICO) ಎಂದೇ ಖ್ಯಾತನಾಮ ಹೊಂದಿರುವ ಮೋಟರ್ ಇಂಡಸ್ಟ್ರೀಸ್ ಕಂಪನಿ (ಇಂದಿನ ಭಾಷ್ ಕಂಪನಿ) 1954ರಲ್ಲಿ ಸ್ಥಾಪನೆಗೊಂಡಿತು. ಪಶ್ಚಿಮ ಜರ್ಮನಿಯ ಏಕಸ್ವಾಮ್ಯ ಬಂಡವಾಳಗಾರರ ಒಂದು ಬಹುರಾಷ್ಟ್ರೀಯ ಕಂಪನಿ ಇದನ್ನು ಸ್ಥಾಪಿಸಿತು. ಕಾರ್ಮಿಕರಿಗೆ ನಿಕೃಷ್ಠ ವೇತನ, ಅಧಿಕ ಕೆಲಸದ ಹೊರೆ, ಅಧಿಕ ಲಾಭ, ಇದು ಈ ಮಾಲೀಕರ ಧೋರಣೆಯಾಗಿತ್ತು. ಕಾರ್ಖಾನೆ ಹೆಚ್ಚು ಹೆಚ್ಚು ಲಾಭಗಳಿಸುತ್ತಾ ತನ್ನ ಬಂಡವಾಳವನ್ನು ವೃದ್ಧಿಸಿಕೊಳ್ಳತೊಡಗಿತ್ತು. 1972ರಲ್ಲಿ ಅದರ…

  • ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ:

    “ಮಾಸ್ಟರ್ ಮೈಂಡ್” ಆರೋಪಿಗಳನ್ನು ಖುಲಾಸೆಗೊಳಿಸಿದ್ದರ ವಿರುದ್ಧ ಸಿಬಿಐ ಮೇಲ್ಮನವಿ ಸಲ್ಲಿಸಿಲ್ಲ!! ವಿಚಾರವಾದಿ ಡಾ. ನರೇಂದ್ರ ದಾಭೋಲ್ಕರ್ ಅವರ ಹತ್ಯೆಯಾಗಿ ಆಗಸ್ಟ್ 20ಕ್ಕೆ 12 ವರ್ಷಗಳು ಕಳೆದಿವೆ. ದಾಭೋಲ್ಕರ್ ಹತ್ಯೆ ನಡೆದ ಹತ್ತು ವರ್ಷ ಎಂಟು ತಿಂಗಳ ನಂತರ (ಮೇ 10, 2024 ರಂದು) ಪುಣೆಯ ವಿಶೇಷ ನ್ಯಾಯಾಲಯವು ಇಬ್ಬರು ಹಿಂದುತ್ವವಾದಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ, ನ್ಯಾಯಾಲಯವು “ಮಾಸ್ಟರ್ ಮೈಂಡ್” ಡಾ ವೀರೇಂದ್ರಸಿನ್ಹ್ ಶರದ್ಚಂದ್ರ ತಾವಡೆ, ವಕೀಲ ಸಂಜೀವ್ ಗಜಾನನ್ ಪುನಾಲೇಕರ್ ಮತ್ತು ಸನಾತನ…

  • Toyota workers ‘ಟೊಯೋಟ’ ಎಂಬ ರಾಕ್ಷಸನ ದವಡೆಯಲ್ಲಿ ಜೀವ ಬಿಡುತ್ತಿರುವ ಕಾರ್ಮಿಕರು

    ‘ಐಕ್ಯರಂಗ’ (ಇಂದಿನ ‘ಜನಶಕ್ತಿ’) ವಾರ ಪತ್ರಿಕೆಯ ಫೆಬ್ರವರಿ 24, 2002 ರ ಸಂಚಿಕೆಯಲ್ಲಿ ಪ್ರಕಟವಾದ ನನ್ನದೊಂದು ಲೇಖನ. ಹೊಸ ವರ್ಷ ಕಾರ್ಮಿಕರ ಪಾಲಿಗೆ ಹೊಸ ಭರವಸೆ ತರಲಿಲ್ಲ. ಮತ್ತದೇ ಆತಂಕ. ಅದೇ ಭಯ. ಅದೇ ಅತಂತ್ರ ಸ್ಥಿತಿ. ಅದೇ ನೋವು ನರಳುವಿಕೆಯಿಂದಲೇ ಕೆಲಸ ಮಾಡಬೇಕಾದ ಒತ್ತಡ. ಹೊಸ ವರ್ಷದಲ್ಲಿ ಈ ಸಂಕಟಗಳು ಮತ್ತಷ್ಟು ಹೆಚ್ಚುವ ಬೀತಿ. ಹೊಸ ವರ್ಷವನ್ನು ಹೊಸ ಹರುಷದೊಂದಿಗೆ ಸ್ವಾಗತಿಸಬೇಕು ಅಂದುಕೊಂಡರೂ ಅದು ಸಾಧ್ಯವಾಗುತ್ತಿಲ್ಲ. ನಾಳೆಗಳ ಕುರಿತು ಸುಂದರ ಕನಸುಗಳನ್ನು ಕಂಡಿದ್ದ ಯುವ ಮನಸ್ಸುಗಳಿಗೆ…

  • LIC -ಎಲ್ ಐ ಸಿ: ಜನರ ಉಳಿತಾಯದ ಮೇಲೆ ಸರ್ಕಾರವೇ ನಿಯಂತ್ರಣವನ್ನು ಹೊಂದಿರಬೇಕು ಎಂಬುದೇ ಇದರ ಸ್ಥಾಪನೆಯ ಗುರಿ

    ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ವಿಶ್ವದ ಒಂದು ವಿಶಿಷ್ಟವಾದ ವಿಮಾ ಸಂಸ್ಥೆಯಾಗಿದೆ. ಎಲ್ಐಸಿಯನ್ನು ಸ್ಥಾಪಿಸುವಾಗ ನೀತಿ ನಿರೂಪಕರು “ಅಪಾಯದ ವಿರುದ್ಧ ಸುರಕ್ಷಿತ ವಿಮೆಯನ್ನು ಒದಗಿಸಿ ಮತ್ತು ಅದೇ ಸಮಯದಲ್ಲಿ, ಜನಸ್ನೇಹಿ ಉಳಿತಾಯ ಸಾಧನವನ್ನು ಒದಗಿಸಿ” ಎಂಬ ಎರಡು ಉದ್ದೇಶಗಳನ್ನು ಹೊಂದಿದ್ದರು. ಆದರೆ, ಇಂದಿನ ಪ್ರಭುತ್ವ ವಿಮಾ ವಲಯದಲ್ಲಿ ಸ್ವದೇಶಿ ಮತ್ತು ವಿದೇಶಿ ಖಾಸಗಿ ಸಂಸ್ಥೆಗಳಿಗೆ ಅವಕಾಶ ಮಾಡಿಕೊಡುವ ಮೂಲಕ ನೀತಿ ನಿರೂಪಕರ ಆಶಯಗಳಿಗೆ ವಿರುದ್ದವಾಗಿ ನಡೆದುಕೊಳ್ಳುತ್ತಿದೆ. ಸಾಲದೆಂಬಂತೆ ಎಲ್ ಐಸಿ ಯ ಷೇರು ಮತ್ತು…

  • ಶೇ. 8 ರಷ್ಟು ಕಾರ್ಪೊರೇಟ್ ತೆರಿಗೆ ಕಡಿತ

    ಸರ್ಕಾರಕ್ಕೆ ವರ್ಷವೊಂದರಲ್ಲಿ ಲಕ್ಷ ಕೋಟಿ ರೂ. ನಷ್ಟ ಮೋದಿ ಸರ್ಕಾರದ 10 ವರ್ಷಗಳ ಸಾಧನೆಗಳಲ್ಲಿ ಉದ್ಯಮಿಗಳ ಸಂಪತ್ತು ವೃದ್ಧಿಗೆ ಸಹಕರಿಸುತ್ತಿರುವುದು ಒಂದು ಬಹುದೊಡ್ಡ ಸಾಧನೆ. ಅದರಲ್ಲೊಂದು ಸಾಧನೆ ಕಾರ್ಪೊರೇಟ್ ತೆರಿಗೆ ಕಡಿತ. ಶೇ. 30 ರಷ್ಟಿದ್ದ ಕಾರ್ಪೊರೇಟ್ ತೆರಿಗೆಯನ್ನು ಶೇ. 22ಕ್ಕೆ  ಕಡಿತ ಮಾಡುವ ಮೂಲಕ ಮೋದಿ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರಕ್ಕೆ ಬರಬೇಕಾದ ಆದಾಯದಲ್ಲಿ ಅಂದಾಜು 4 ಲಕ್ಷ ಕೋಟಿ ರೂ. ಕಳೆದುಕೊಂಡಿದೆ. ಇದರರ್ಥ, ಇಷ್ಟು ದೊಡ್ಡ ಮೊತ್ತದ ಸಂಪತ್ತನ್ನು ಉದ್ಯಮಿಗಳ ಸಂಪತ್ತಿನ ವೃದ್ಧಿಗೆ…

  • ರಿಸರ್ವ್ ಬ್ಯಾಂಕ್ ನಲ್ಲಿನ ಮೀಸಲು ನಿಧಿಯನ್ನೂ ಬಿಡದ ಮೋದಿ ಸರ್ಕಾರ

    ಭಾರತ ಒಕ್ಕೂಟ ಸರ್ಕಾರದ ಪ್ರಧಾನಿ ಪಟ್ಟ ಅಲಂಕಿಸಿದ ಮೋದಿ, ತಮ್ಮಅಧಿಕಾರಾವಧಿಯ 9ವರ್ಷಗಳಲ್ಲಿ 4.7 ಲಕ್ಷ ಕೋಟಿ ರೂ ಮೌಲ್ಯದ ಸಾರ್ವಜನಿಕ ಆಸ್ತಿಗಳನ್ನು ಮಾರಿದರು, ತಮ್ಮ ಅವಧಿಯಲ್ಲೇ ನೂರು ಲಕ್ಷ ಕೋಟಿ ರೂ. (ರೂ. 100 ಲಕ್ಷ ಕೋಟಿ ) ಸಾಲ ಮಾಡಿ, 2014ರ ವರೆಗೂ ರೂ. 55 ಲಕ್ಷ ಕೋಟಿ ಇದ್ದ ಒಕ್ಕೂಟ ಸರ್ಕಾರದ ಸಾಲವನ್ನು ರೂ. 155 ಲಕ್ಷ ಕೋಟಿಗೆ ಹೆಚ್ಚಿಸಿದರು. ಇದೂ ಸಾಲದು ಎಂಬಂತೆ, ಆಪತ್ತಿನ ಕಾಲಕ್ಕೆ ಕೂಡಿಟ್ಟಿದ್ದ ರಿಸರ್ವ್ ಬ್ಯಾಂಕಿನ ಮೀಸಲು ಹಣದ…

  • ಶಿಕ್ಷಣ ಎಂಬುದು ಸರಕಲ್ಲ

    ಸರ್ಕಾರವು ಸಾರ್ವಜನಿಕರಿಗೆ ಶಿಕ್ಷಣವನ್ನು ಒದಗಿಸುವ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಸಂಪೂರ್ಣವಾಗಿ ಖಾಸಗಿಯವರಿಗೆ ಹಸ್ತಾಂತರಿಸುವ ಕಡೆಗೆ ಪ್ರಯಾಣಿಸಿದೆ.  ಸಾಮಾಜಿಕ ಒಳಿತಿಗಾಗಿ ಶಿಕ್ಷಣ. ಶಿಕ್ಷಣ ಎಂಬುದು ಮಾರಟದ ಸರಕಲ್ಲ. ಇದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಬಾರದು ಅಥವಾ ಖರೀದಿಸಬಾರದು. ನೆಲ್ಸನ್ ಮಂಡೇಲಾ ಅವರು “ಖಾಸಗೀಕರಣವು ಶಿಕ್ಷಣದ ಹಕ್ಕನ್ನು ಮೊಟಕುಗೊಳಿಸುತ್ತದೆ” ಎಂದು ಹೇಳಿದ್ದರು. ಖ್ಯಾತ ಶಿಕ್ಷಣ ತಜ್ಞ ಪಾವೊಲೊ ಫ್ರಿಯಾರಿ ಅವರ ಪ್ರಕಾರ, “ಶಿಕ್ಷಣವು ತುಳಿತಕ್ಕೊಳಗಾದ ಜನರ ಸೃಜನಶೀಲತೆಯನ್ನು ಹೊರತರುವುದು ಮತ್ತು ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ದಮನಕಾರಿ ಸಮಾಜದಲ್ಲಿ ಸ್ವಾತಂತ್ರ್ಯದ ಶಕ್ತಿಯನ್ನು…

  • ಸರ್ಕಾರಿ ನೌಕರರು ಆರೆಸ್ಸೆಸ್ ಸೇರುವುದರಿಂದ, ಧಾರ್ಮಿಕ ತಾರತಮ್ಯದ ಕಾರ್ಯನಿರ್ವಹಣೆಯಿಂದ ಸಮಾಜಕ್ಕೆ ದೊಡ್ಡ ಅಪಾಯ

    ಸರ್ಕಾರಿ ನೌಕರರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಲು ಇದ್ದ ನಿಷೇದವನ್ನು ಮೋದಿ ಸರಕಾರ ಹಿಂತೆಗೆದುಕೊಂಡಿದೆ. ಕೇಂದ್ರದ ಈ ನಿರ್ಧಾರಕ್ಕೆ ಕಾರಣಗಳೇನು? ಆರ್‌ ಎಸ್‌ ಎಸ್‌ ನಲ್ಲಿ ಏನಾದರೂ ಬದಲಾವಣೆಯಾಗಿದೆಯೇ? ಜನರ ನಡುವೆ ಒಡಕುಂಟು ಮಾಡಿ ರಾಜಕೀಯ ಅಧಿಕಾರ ಪಡೆಯುವ ಅದರ ತಂತ್ರ ಬದಲಾಗಿದೆಯೇ? 1948ರಲ್ಲಿ ಮಹಾತ್ಮ ಗಾಂಧೀಜಿಯವರ ಹತ್ಯೆ ಮತ್ತು 1992ರಲ್ಲಿ ಬಾಬರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ದ್ವೇಷದ ವಿಷವನ್ನು ಎರಚಿದ ಕೆಟ್ಟ ಸಿದ್ಧಾಂತಕ್ಕೆ ಅದು ಇಂದಿಗೂ ಬದ್ಧವಾಗಿದೆ. ಜಾತಿ, ಧರ್ಮದ ಭೇದ ಮರೆತು…

  • ಕನ್ವರ್  ಯಾತ್ರೆ: ವಿಭಜಿಸುವ ಕೆಲಸ ಬಹಿರಂಗವಾಗಿಯೇ ಪ್ರಾರಂಭವಾಗಿದೆ

    ಬಿಜೆಪಿ ಆಡಳಿತದ ಉತ್ತರಪ್ರದೇಶದಲ್ಲಿ ಈಗ ಪ್ರತ್ಯಕ್ಷವಾಗಿಯೇ ಅಲ್ಪಸಂಖ್ಯಾತರ ಮೇಳೆ ದಾಳಿ ಪ್ರಾರಂಭವಾಗಿದೆ. ಧರ್ಮದ ಹೆಸರಿನಲ್ಲಿ ವಿಭಜಿಸುವ ಕೆಲಸವೂ ಬಹಿರಂಗವಾಗಿಯೇ ಪ್ರಾರಂಭವಾಗಿದೆ. ನಿನ್ನ ಹೆಸರೇನು? ಅದನ್ನು ಬೋರ್ಡ್ ನಲ್ಲಿ ಬರೆದು ಕುತ್ತಿಗೆಗೆ ನೇತುಹಾಕಿಕೊ ಎನ್ನುತ್ತಾರೆ ಅವರು. ಅಂದಿನ ಹಿಟ್ಲರ್, ಮುಸೊಲಿನಿಯ ಹಾದಿಯನ್ನು ಅನುಸರಿಸುತ್ತ ಇಂದು ಉತ್ತರಪ್ರದೇಶ ರಾಜ್ಯದ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ನಿರಂಕುಶಾಧಿಕಾರಿಯಾಗಿ ಜನರ ಒಗ್ಗಟ್ಟನ್ನು ತುಂಡರಿಸುತ್ತಿದ್ದಾರೆ. ಮನುಷ್ಯರನ್ನು ಧರ್ಮದ ಆದಾರದಲ್ಲಿ ವಿಭಜಿಸಿ ಗಲಭೆ ಎಬ್ಬಿಸಲು ಪ್ರಜಾಪ್ರಭುತ್ವ ದೇಶದಲ್ಲಿ ನಿಸ್ಸಂಶಯವಾಗಿ ಬಾಗಿಲುಗಳು ತೆರೆದುಕೊಳ್ಳುತ್ತಿವೆ. ಇದು ಭಾರತದ ಪ್ರಜಾಭುತ್ವ ಮತ್ತು…