ವರ್ಗ: ಉದ್ಯಮಿಗಳಿಗಾಗಿ
-
ಎಚ್ ಎಂ ಟಿ ಕಾರ್ಖಾನೆ ಮುಚ್ಚಲು ಕಾರ್ಮಿಕರು ಕಾರಣವಲ್ಲ
ಕಾರ್ಖಾನೆಗಳು ಅನುಭವಿಸುವ ನಷ್ಟಕ್ಕೆ ಅಲ್ಲಿನ ಕಾರ್ಮಿಕರನ್ನು ಹೊಣೆ ಮಾಡುವ ಕೆಲಸ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಾಗಾದರೆ, ಕಾರ್ಮಿಕರು ಕೆಲಸಮಾಡುವ ಯಾವುದೇ ಕಂಪನಿ ಲಾಭ ಗಳಿಸುತ್ತಿಲ್ಲವೇ? ಅದು ಖಾಸಗಿ ಕಂಪನಿ ಇರಬಹುದು, ಸಾರ್ವಜನಿಕ ಕಂಪನಿ ಇರಬಹುದು. ಕಾರ್ಮಿಕರ ಶ್ರಮವಿಲ್ಲದೇ ಲಾಭ ಗಳಿಸಲು ಸಾಧ್ಯವೇ? ವಾಚ್ ತಯ್ಯಾರಿಕಾ ಖಾಸಗೀ ಕಂಪನಿಗಳಿಂದ ಲಾಭ ಗಳಿಸಲು ಸಾಧ್ಯವೆಂದಾದರೆ, ಸಾರ್ವಜನಿಕ ಕಂಪನಿಗಳಿಂದ ಅದು ಏಕೆ ಸಾಧ್ಯವಿಲ್ಲ? ಖಾಸಗೀ ಕಾರ್ಖಾನೆಗಳ ಕಾರ್ಮಿಕರೂ ಸಂಘಟಿತರಾಗಿದ್ದಾರೆ. ಅವರೂ ತಮ್ಮ ಬೇಡಿಕೆಗಳನ್ನು ಹೋರಾಟದ ಮೂಲಕವೇ ಗಳಿಸಿಕೊಳ್ಳುತ್ತಿದ್ದಾರೆ. ಆದರೂ ಆ ಕಂಪನಿಗಳು…
-
ನೋಟುಗಳ ಅಮಾನ್ಯೀಕರಣ: ಅಂದು ಕೊಟ್ಟ ಕಾರಣ ಭ್ರಷ್ಟಾಚಾರ ಮತ್ತು ಕಪ್ಪುಹಣ, ಭಯೋತ್ಪಾದನೆ ದಾಳಿ!!??
2016ರ ನವೆಂಬರ್ 8, ರಾತ್ರಿ 8 ಗಂಟೆ. ಮೋದಿಯವರ ಮಾತುಗಳು ಪ್ರಸಾರವಾಗುತ್ತವೆ. “ನನ್ನ ಪ್ರೀತಿಯ ದೇಶವಾಸಿಗಳೇ, ನೀವು ಸಂತೋಷ ಮತ್ತು ಹೊಸ ಭರವಸೆಯೊಂದಿಗೆ ದೀಪಾವಳಿಯ ಹಬ್ಬದ ಋತುವನ್ನು ಮುಗಿಸಿದ್ದೀರಿ ಎಂದು ನಾನು ಭಾವಿಸುತ್ತೇನೆ. ಇಂದು, ನಾನು ಮಾತನಾಡುತ್ತೇನೆ. ಭ್ರಷ್ಟಾಚಾರ ಮತ್ತು ಕಪ್ಪುಹಣ ಈ ದೇಶದಲ್ಲಿ ಬೇರೂರಿರುವ ರೋಗಗಳು, ಅವು ನಮ್ಮ ಯಶಸ್ಸಿಗೆ ಅಡ್ಡಿಗಳಾಗಿವೆ. … ಜಾಗತಿಕ ಭ್ರಷ್ಟಾಚಾರದ ಶ್ರೇಯಾಂಕಗಳಲ್ಲಿ ನಾವು ತುಂಬಾ ಮೇಲಿನ ಸ್ಥಾನದಲ್ಲಿರುತ್ತೇವೆ. ಅಮಾಯಕರ ಮೇಲೆ ಭಯೋತ್ಪಾದನೆ ದಾಳಿ ಮಾಡುತ್ತದೆ. ಈ ಉಗ್ರರಿಗೆ ಯಾರು ಹಣ…
-
ವಕ್ಫ್ ಆಸ್ತಿ ವಿವಾದ: ಯಾಕಿಷ್ಟು ಗದ್ದಲ?
ಬಿಜೆಪಿ ಹೊಸ ಹೊಸ ಕುತಂತ್ರದ ಬಲೆ ಬೀಸುವ ಮೂಲಕ ಜನರನ್ನು ಮರುಳು ಮಾಡುತ್ತಲೇ ಇರುವುದನ್ನು ನೋಡುತ್ತಲೇ ಬಂದಿದ್ದೇವೆ. ಇಂದು ವಕ್ಪ್ ಆಸ್ತಿ ವಿಷಯದಲ್ಲಿ ಮುಸ್ಲೀಮರು ಹಿಂದೂಗಳ ಆಸ್ತಿ ಕಸಿದುಕೊಳ್ಳುತ್ತಿದ್ದಾರೆ ಎಂಬ ಮತ್ತೊಂದು ಕುತಂತ್ರದ ಬಲೆ ಬೀಸಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಕ್ಪ್ ಬೋರ್ಡ್ ತಿದ್ದುಪಡಿ ಮಸೂದೆ ತರಲು ಮುಂದಾಗಿರುವ ಈ ಸಂದರ್ಭದಲ್ಲಿ, ಇದಕ್ಕೆ ಪೂರಕವಾಗಿ ಬಹುಸಂಖ್ಯಾತ ಸಮುದಾಯದ ಜನರ ಬೆಂಬಲ ಪಡೆಯಲು, ಕರ್ನಾಟಕದ ವಕ್ಪ್ ಮಂಡಳಿಯು ಹಿಂದೂ ರೈತರ ಮತ್ತು ಮಂದಿರಗಳ ಭೂಮಿ ಕಸಿದುಕೊಳ್ಳುತ್ತಿದೆ ಎಂದು…
-
ಶೇ. 8 ರಷ್ಟು ಕಾರ್ಪೊರೇಟ್ ತೆರಿಗೆ ಕಡಿತ
ಸರ್ಕಾರಕ್ಕೆ ವರ್ಷವೊಂದರಲ್ಲಿ ಲಕ್ಷ ಕೋಟಿ ರೂ. ನಷ್ಟ ಮೋದಿ ಸರ್ಕಾರದ 10 ವರ್ಷಗಳ ಸಾಧನೆಗಳಲ್ಲಿ ಉದ್ಯಮಿಗಳ ಸಂಪತ್ತು ವೃದ್ಧಿಗೆ ಸಹಕರಿಸುತ್ತಿರುವುದು ಒಂದು ಬಹುದೊಡ್ಡ ಸಾಧನೆ. ಅದರಲ್ಲೊಂದು ಸಾಧನೆ ಕಾರ್ಪೊರೇಟ್ ತೆರಿಗೆ ಕಡಿತ. ಶೇ. 30 ರಷ್ಟಿದ್ದ ಕಾರ್ಪೊರೇಟ್ ತೆರಿಗೆಯನ್ನು ಶೇ. 22ಕ್ಕೆ ಕಡಿತ ಮಾಡುವ ಮೂಲಕ ಮೋದಿ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರಕ್ಕೆ ಬರಬೇಕಾದ ಆದಾಯದಲ್ಲಿ ಅಂದಾಜು 4 ಲಕ್ಷ ಕೋಟಿ ರೂ. ಕಳೆದುಕೊಂಡಿದೆ. ಇದರರ್ಥ, ಇಷ್ಟು ದೊಡ್ಡ ಮೊತ್ತದ ಸಂಪತ್ತನ್ನು ಉದ್ಯಮಿಗಳ ಸಂಪತ್ತಿನ ವೃದ್ಧಿಗೆ…
-
14.56 ಲಕ್ಷ ಕೋಟಿ ರೈಟ್ಆಫ್: 20 ಲಕ್ಷ ಕೋಟಿಗೂ ಹೆಚ್ಚು NPA
ಮೋದಿ ಸರ್ಕಾರದ 10 ವರ್ಷಗಳ ಸಾಧನೆಗಳಲ್ಲಿ ಬ್ಯಾಂಕುಗಳಲ್ಲಿ ಸಾರ್ವಜನಿಕರ ಸಂಪತ್ತನ್ನು ಲೂಟಿ ಮಾಡಲು ದೊಡ್ಡ ಉದ್ಯಮಿಗಳಿಗೆ ಮುಕ್ತ ಅವಕಾಶ ಕೊಟ್ಟಿರುವುದೂ ಒಂದು ಸಾಧನೆ. ಆದರೆ, ಅವರ ಸಾಧನೆಗಳ ಪ್ರಚಾರದ ಪಟ್ಟಿಯಲ್ಲಿ ಈ ಅಂಶ ಸೇರಿಸಿಲ್ಲ. 2014-15 ರಿಂದ 2021-22ರ 8 ವರ್ಷಗಳ ಅವಧಿಯಲ್ಲಿ 12,49,698 ಕೋಟಿ ರೂಗಳ ಸಾಲ ರೈಟ್ ಆಫ್ (write off) ಮಾಡಲಾಗಿತ್ತು. 2022-23ರ ಆರ್ಥಿಕ ವರ್ಷದ ಮೊದಲ 9 ತಿಂಗಳ ಅವಧಿಯಲ್ಲಿ 91,000 ಕೋಟಿ ಸಾಲ ರೈಟ್ ಆಫ್ ಮಾಡಲಾಗಿದೆ ಎಂದು ರಾಜ್ಯಸಭೆಗೆ…
-
ಸಂಪತ್ತಿನ ಅಸಮಾನತೆಯನ್ನು ಬಹಿರಂಗಪಡಿಸಿದ ಅಂಬಾನಿ ಮಗನ ಮದುವೆ
ಪಡಿತರದ ಮೂಲಕ ತಿಂಗಳಿಗೆ 5 ಕೆಜಿ ಉಚಿತ ಧಾನ್ಯಗಳನ್ನು ಪಡೆಯುತ್ತಿರುವ 80 ಕೋಟಿ ಜನರಿರುವ ದೇಶದಲ್ಲಿ, 5,000 ಕೋಟಿ ರೂ. ವೆಚ್ಚ ಮಾಡಿ ಅಂಬಾನಿ ಕುಟುಂಬ ತನ್ನ ಮಗನ ಮದುವೆ ಮಾಡಿದೆ. ಕೆಲವರು ಇದನ್ನು ‘ಕಷ್ಟಪಟ್ಟು ಗಳಿಸಿದ ಹಣವನ್ನು ಈ ರೀತಿ ಖರ್ಚುಮಾಡುವುದು ತಪ್ಪೇನೂ ಅಲ್ಲ ಎನ್ನುತ್ತಾರೆ, ಮತ್ತೆ ಕೆಲವರು ಇದನ್ನು ಭಾರತದಲ್ಲಿ ಬೆಳೆಯುತ್ತಿರುವ ಅಸಮಾನತೆಯ ಸಂಕೇತವಾಗಿ ಕಾಣುತ್ತಾರೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕೆಲವರು ಮಾತ್ರ ಅತ್ಯಧಿಕ ಸಂಪತ್ತನ್ನು ಗಳಿಸಲು ಅವಕಾಶ ಮತ್ತು ಬಹುಸಂಖ್ಯಾತ ಜನರು ಕಡು ಬಡತನದಲ್ಲಿರಲು…
-
ಪಿಎಂ ಫಸಲ್ ಭೀಮಾ ಯೋಜನೆ: ರೈತರಿಗಿಂತ ವಿಮಾ ಕಂಪನಿಗಳಿಗೇ ಹೆಚ್ಚು ಲಾಭ
ಕಳೆದ 10 ವರ್ಷಗಳ ಮೋದಿ ಆಡಳಿತದಲ್ಲಿ ರೂಪಿಸಿ ಜಾರಿಗೆ ತರಲಾದ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಒಂದು. ಕೃಷಿ ವಿಮಾ ಯೋಜನೆಯನ್ನು ಖಾಸಗಿ ವಿಮಾ ಕಂಪನಿಗಳಿಗೂ ತೆರೆದಿಟ್ಟಿದೆ. ಈ ಯೋಜನೆ ರೈತರ ಲಾಭಕ್ಕಿಂತ ಖಾಸಗಿ ವಿಮಾ ಕಂಪನಿಗಳಿಗೇ ಹೆಚ್ಚು ಲಾಭ ತಂದುಕೊಡುತ್ತಿದೆ. ದಾಖಲೆಗಳ ಮೇಲಷ್ಟೇ ಈ ಯೋಜನೆಯು ರೈತ ಸ್ನೇಹಿ ಎಂಬ ಚಿತ್ರವನ್ನು ಪ್ರಸ್ತುತಪಡಿಸುತ್ತದೆ. ಆದರೆ ವಾಸ್ತವದಲ್ಲಿ ಆ ರೀತಿಯಲ್ಲಿ ಇಲ್ಲ. ಇತ್ಯರ್ಥ/ಹಕ್ಕುಗಳ ಸ್ವೀಕೃತಿಯಲ್ಲಿ ವಿಳಂಬ ಮತ್ತು ತಾಂತ್ರಿಕ ದೋಷಗಳಂತಹ ಅನೇಕ ಸಮಸ್ಯೆಗಳನ್ನು…
-
ಪೇಟಿಎಂ ಕುಸಿತ: ಹೂಡಿಕೆದಾರರ 15,000 ಕೋಟಿ ರೂ. ಕಣ್ಮರೆ
ನರೇಂದ್ರ ಮೋದಿಯವರ 10 ವರ್ಷಗಳ ಆಡಳಿತದ ಅಂತ್ಯದಲ್ಲಿ ಮತ್ತೊಂದು ಮೆಘಾ ಹಗರಣ ಬೆಳಕಿಗೆ ಬಂದಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ಪರವಾನಗಿಯನ್ನು ರದ್ದುಪಡಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ರಿಸರ್ವ್ ಬ್ಯಾಂಕ್ ಈಗಾಗಲೇ ಹೊಸ ಗ್ರಾಹಕರನ್ನು ಸೇರಿಸಲು ನಿರ್ಬಂಧ ಮತ್ತು ಹಾಲಿ ಗ್ರಾಹಕರಿಂದ ಹಣ ಪಡೆಯುವುದನ್ನು ನಿಷೇಧಿಸುವ ಅನೇಕ ನಿರ್ಬಂಧಗಳನ್ನು ವಿಧಿಸಿದ್ದರೆ, ಆ ಕಂಪನಿಯ ಸಂಸ್ಥಾಪಕ ಮತ್ತು ಅದರ ದೊಡ್ಡ ಷೇರುದಾರರಾಗಿರುವ ಉತ್ತರ ಪ್ರದೇಶದ ವಿಜಯ್ ಶೇಖರ್ ಶರ್ಮಾ ಅವರು ಕಂಪನಿಯ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ. ಆರ್ಬಿಐ ಒತ್ತಾಯದ…