ಲೇಖಕ: Siddaiah C

  • ಧಾರ್ಮಿಕ ದ್ವೇಷ, ಜನಾಂಗೀಯತೆ ಮತ್ತು ಆಸ್ಟ್ರೇಲಿಯಾದಲ್ಲಿ ಭಯೋತ್ಪಾದಕರ ದಾಳಿ

    ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಯಹೂದಿಗಳ ಮೇಲಿನ ಭಯೋತ್ಪಾದಕರ ದಾಳಿಯು, ಧಾರ್ಮಿಕ ದ್ವೇಷ, ಜನಾಂಗೀಯತೆ, ದ್ವೇಷ ಭಾಷಣಗಳು ಹಾಗೂ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ಉನ್ಮಾದದ ​​ಭಾವನೆಗಳು ಜಗತ್ತಿನಲ್ಲಿ ಏನೆಲ್ಲಾ ಅನಾಹುತ ಉಂಟುಮಾಡುತ್ತವೆ ಎಂಬುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ದ್ವೇಷವು ಮತ್ತಷ್ಟು ದ್ವೇಷವನ್ನು ಹುಟ್ಟುಹಾಕುತ್ತದೆಯೇ ಹೊರತು, ಅದು ಶಾಂತಿ ಅಥವಾ ಸಾಮರಸ್ಯವನ್ನು ತರುವುದಿಲ್ಲ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿನ ಬೊಂಡಿ ಬೀಚ್‌ನಲ್ಲಿ (Australia Bondi Beach) ತಂದೆ ಮತ್ತು ಮಗ ಯಹೂದಿಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಿರುವುದು ಆಘಾತಕಾರಿಯಾಗಿದೆ. ಡಿಸೆಂಬರ್‌ 14ರಂದು ಭಾನುವಾರ ಬೀಚ್‌…

  • ಎಚ್ ಎಂ ಟಿ ಕಾರ್ಖಾನೆ ಮುಚ್ಚಲು ಕಾರ್ಮಿಕರು ಕಾರಣವಲ್ಲ

    ಕಾರ್ಖಾನೆಗಳು ಅನುಭವಿಸುವ ನಷ್ಟಕ್ಕೆ ಅಲ್ಲಿನ ಕಾರ್ಮಿಕರನ್ನು ಹೊಣೆ ಮಾಡುವ ಕೆಲಸ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಾಗಾದರೆ, ಕಾರ್ಮಿಕರು ಕೆಲಸಮಾಡುವ ಯಾವುದೇ ಕಂಪನಿ ಲಾಭ ಗಳಿಸುತ್ತಿಲ್ಲವೇ? ಅದು ಖಾಸಗಿ ಕಂಪನಿ ಇರಬಹುದು, ಸಾರ್ವಜನಿಕ ಕಂಪನಿ ಇರಬಹುದು. ಕಾರ್ಮಿಕರ ಶ್ರಮವಿಲ್ಲದೇ ಲಾಭ ಗಳಿಸಲು ಸಾಧ್ಯವೇ? ವಾಚ್ ತಯ್ಯಾರಿಕಾ ಖಾಸಗೀ ಕಂಪನಿಗಳಿಂದ ಲಾಭ ಗಳಿಸಲು ಸಾಧ್ಯವೆಂದಾದರೆ, ಸಾರ್ವಜನಿಕ ಕಂಪನಿಗಳಿಂದ ಅದು ಏಕೆ ಸಾಧ್ಯವಿಲ್ಲ? ಖಾಸಗೀ ಕಾರ್ಖಾನೆಗಳ ಕಾರ್ಮಿಕರೂ ಸಂಘಟಿತರಾಗಿದ್ದಾರೆ. ಅವರೂ ತಮ್ಮ ಬೇಡಿಕೆಗಳನ್ನು ಹೋರಾಟದ ಮೂಲಕವೇ ಗಳಿಸಿಕೊಳ್ಳುತ್ತಿದ್ದಾರೆ. ಆದರೂ ಆ ಕಂಪನಿಗಳು…

  • “ಪುಕ್ಕಟೆ ಸಿಕ್ಕಿದ್ರೆ ನಂಗೊಂದು, ನಮ್ಮಪ್ಪನಿಗೂ ಒಂದಿರ್ಲಿ ಅನ್ನೋ ಮಂದಿಗೆ… ಕೆಜಿ ಅಕ್ಕಿ”

    ಪೋಟೊ ಕೊಡುಗೆ: ಹಿಂದೂಸ್ತಾನ್ ಟೈಮ್ಸ್ ʻʻಪುಕ್ಕಟೆ ಸಿಕ್ಕಿದ್ರೆ ನಂಗೊಂದು, ನಮ್ಮಪ್ಪನಿಗೂ ಒಂದಿರ್ಲಿ ಅನ್ನೋ ಮಂದಿಗೆ ರೂಪಾಯಿಗೊಂದು ಕೆಜಿ ಅಕ್ಕಿ!” ಇದು 27 ಏಪ್ರಿಲ್,2013ರ ಕನ್ನಡಪ್ರಭ ಪತ್ರಿಕೆಯಲ್ಲಿನ ‘ಬೆತ್ತಲೆ ಪ್ರಪಂಚ’ ಅಂಕಣದಲ್ಲಿ ಪ್ರತಾಪ್ ಸಿಂಹ ಬರೆದ ಲೇಖನದ ತಲೆಬರಹ. ಈ ಲೇಖನದಲ್ಲಿ, “2004ರಲ್ಲಿ ಪ್ರಧಾನಿ ಸ್ಥಾನವನ್ನು ನಿರಾಕರಿಸುವ ನಾಟಕವಾಡಿ, ರಾಷ್ಟ್ರೀಯ ಸಲಹಾ ಮಂಡಳಿ (ಎನ್ಎಸಿ) ಮೂಲಕ ಪರೋಕ್ಷವಾಗಿ ಸರ್ಕಾರದ ಕಡಿವಾಣ ಕೈಗೆತ್ತಿಕೊಂಡ ಸೋನಿಯಾ ಗಾಂಧಿ ನೇತೃತ್ವದ ಈ ಸಮಿತಿಯಲ್ಲಿ ತರ್ಲೆ ಕಮ್ಯುನಿಸ್ಟರೇ ತುಂಬಿಕೊಂಡಿದ್ದಾರೆ. ಇವರ ಸಲಹೆಯ ಫಲವೇ ನರೇಗಾ…

  • ಸಿಐಟಿಯು ಸ್ಥಾಪನೆ, ನಂತರದ ಐಕ್ಯ ಚಳುವಳಿ ಕಟ್ಟಿದ ಅದರ ಪಾತ್ರ

    ಭಾರತದ ಕಾರ್ಮಿಕ ಚಳವಳಿಯ ಇತಿಹಾಸದಲ್ಲಿ ಸಿಐಟಿಯು ವಹಿಸಿದ ಪಾತ್ರ ಅಗಾಧವಾದುದು. ಕಾರ್ಮಿಕ ವರ್ಗವನ್ನು ಒಗ್ಗೂಡಿಸುವ ಉದ್ದೇಶದಿಂದ ಸಿಐಟಿಯು ಅವಿರತ ಹೋರಾಟ ನಡೆಸುತ್ತಿದೆ. ಎಷ್ಟೇ ಏರಿಳಿತಗಳಿದ್ದರೂ ಕಾರ್ಮಿಕರ ಪರವಾಗಿ, ಕಾರ್ಮಿಕ ಹಕ್ಕುಗಳಿಗಾಗಿ ಮುಂದೆ ಸಾಗುತ್ತಿದೆ. ನಿರಂತರವಾಗಿ ಕಾರ್ಮಿಕ ಜಗತ್ತನ್ನು ಜಾಗೃತಗೊಳಿಸುತ್ತಿದೆ. ಸಿಐಟಿಯು ಸ್ಥಾಪನೆ, ನಂತರದ ಐಕ್ಯ ಚಳುವಳಿ ಕಟ್ಟುವುದರಲ್ಲಿ ಅದರ ಪಾತ್ರವನ್ನು ಸಂಕ್ಷಪ್ತವಾಗಿ ಕೊಡುವ ಪ್ರಯತ್ನ ಇಲ್ಲಿದೆ. ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) 1970ರ ಮೇ 30ರಂದು ಕೊಲ್ಕತ್ತ ನಗರದಲ್ಲಿ ಸ್ಥಾಪನೆಯಾಯಿತು. ಈ ಅವಧಿಯಲ್ಲಿ ಸಿಐಟಿಯು…

  • ವಿಮೋಚನೆಯ ಹಾದಿ: ಮಹಾ ಅಕ್ಟೋಬರ್ ಕ್ರಾಂತಿ

    ಜನರಿಗೆ ಎಲ್ಲಾ ಸೌಕರ್ಯಗಳನ್ನು ಒದಗಿಸಿದ್ದ ಎಪ್ಪತ್ತು ವರ್ಷಗಳ ಸಮಾಜವಾದವು ಕ್ರಮೇಣ ದುರ್ಬಲಗೊಂಡು 1989 ರಲ್ಲಿ ಕುಸಿಯಿತು. ಇದು ಏಕೆ ಸಂಭವಿಸಿತು? ಕಮ್ಯುನಿಸ್ಟ್ ಪಕ್ಷಗಳು ಅಧಿಕಾರಕ್ಕೆ ಬರುವುದು ಆ ದೇಶದಲ್ಲಿ ಸಮಾಜವಾದವನ್ನು ನಿರ್ಮಿಸುವುದಕ್ಕಿಂತ ಭಿನ್ನವಾಗಿದೆ. ಇವೆರಡೂ ಒಂದೇ ಆಗಿರುವುದಿಲ್ಲ ಅಥವಾ ಸ್ವಯಂಚಾಲಿತವಾಗಿ ಸಂಭವಿಸುವುದಿಲ್ಲ. ಸಮಾಜವಾದವು ಖಾಸಗಿ ಆಸ್ತಿಯಿಲ್ಲದ ಸಮಾಜವಾಗಿದೆ. ಅದಕ್ಕಾಗಿ ಆರ್ಥಿಕ ವ್ಯವಸ್ಥೆಯನ್ನು ದೀರ್ಘಕಾಲದವರೆಗೆ ಹಲವು ರೂಪಗಳಲ್ಲಿ ನಿರ್ವಹಿಸಬೇಕು ಮತ್ತು ಆ ಹಂತವನ್ನು ತಲುಪಬೇಕು. ಜನರ ಪ್ರಜ್ಞೆಯ ಮಟ್ಟಕ್ಕೆ ಅನುಗುಣವಾಗಿ ಆಸ್ತಿಯ ರೂಪಗಳನ್ನು ಬದಲಾಯಿಸುವ ಮೂಲಕ ನಾವು ಮುಂದುವರಿಯಬೇಕು.…

  • ಪುರೋಹಿತಶಾಹಿ: ಹಾಗೆಂದರೇನು?

    ‘ಪುರೋಹಿತಶಾಹಿ’ ಪದ ಬಳಕೆ ಮಾಡಿದಾಗಲೆಲ್ಲಾ ಕೆಲವರು ‘ಹಾಗೆಂದರೇನು’ ಎಂದು ಖಾರವಾಗಿ ಪ್ರಶ್ನಿಸುತ್ತಾರೆ. ಅದಕ್ಕೆ ನನ್ನ ಉತ್ತರ ಹೀಗಿದೆ.ನಾವೇ ಶ್ರೇಷ್ಠ, ನಾವು ಎಲ್ಲರಿಗಿಂತ ಬುದ್ದಿವಂತರು. ನಮ್ಮ ಧರ್ಮವೇ ಶ್ರೇಷ್ಠ, ನಾವು ನಂಬಿದ ದೇವರೇ ಸತ್ಯ, ಇತರರು ನಂಬಿರುವ ದೇವರುಗಳಿಗೆಲ್ಲಾ ನಾವು ನಂಬಿದ ದೇವರೇ ಮೂಲ. ನಮ್ಮ ಆಚರಣೆಗಳೇ ಶ್ರೇಷ್ಠ, ನಮ್ಮ ಆಹಾರ ಪದ್ದತಿಯೇ ಶ್ರೇಷ್ಠ, ಜಗತ್ತಿನ ಸೃಷ್ಟಿಯ ಬಗ್ಗೆ ನಾವು ನಂಬಿರುವುದೇ ಶ್ರೇಷ್ಠ, ಜನರ ಸಂಕಷ್ಟಗಳಿಗೆ ಗ್ರಹಗತಿಗಳೇ ಕಾರಣ, ಅಂತಹ ಗ್ರಹಗತಿಗಳಿಂದಾಗುವ ಕೆಡುಕನ್ನು ಪೂಜೆ, ಮಂತ್ರ, ಹೋಮ, ಹವನಗಳ…

  • ಮಾಲೆಗಾಂವ್ ಪಿತೂರಿಗಾರರ ಆಲೋಚನೆಗಳಲ್ಲಿ ‘ವಿಷವೃಕ್ಷದ ಬೀಜಗಳು’

    2008 ರಲ್ಲಿ ನಡೆದ ಮಾಲೆಗಾಂವ್ ಸ್ಪೋಟದಲ್ಲಿ ಆರು ಜನರು ಸಾವನ್ನಪ್ಪಿದರು. ಈ ಪ್ರಕರಣಕ್ಕೆ ಸಂಬಂಧಿಸಿ, ಆರೋಪಿಗಳಾದ ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಸೇರಿದಂತೆ, ಎಲ್ಲ ಆರೋಪಿಗಳನ್ನು ಜುಲೈ 31, 2025 ರಂದು ಮುಂಬೈನ NIA ನ್ಯಾಯಾಲಯವು ಖುಲಾಸೆಗೊಳಿಸಿದೆ. ಪ್ರಕರಣವು ಬಲವಾದ ಅನುಮಾನವನ್ನು ಸೃಷ್ಟಿಸಿದೆ, ಆದರೆ ಆರೋಪಗಳನ್ನು ಸಾಬೀತುಪಡಿಸಲು ನಿಜವಾದ ಪುರಾವೆಗಳನ್ನು ಪ್ರಾಸಿಕ್ಯೂಷನ್ ಮಂಡಿಸಲಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸ್ಫೋಟದಲ್ಲಿ ಸಾವನ್ನಪ್ಪಿದ ಕುಟುಂಬಗಳ ಸದಸ್ಯರು ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯ ಮೇರೆಗೆ, ಬಾಂಬೆ ಹೈಕೋರ್ಟ್…

  • ಕೊರೋನಾ ಸಮಯದಲ್ಲಿ ಎಲ್ಲಿತ್ತು ಆ ‘ಚಡ್ಡಿ’?

    ಎಲ್ಲಿ, ಎಲ್ಲಿ, ಎಲ್ಲಿ ಆ ಚಡ್ಡಿ?ಮಂದಿರ ಕಟ್ಟಲು ರಸೀದಿ ಪುಸ್ತಕ ಹಿಡಿದು ಮನೆ ಮನೆಗೆ ಬರುವ ಚಡ್ಡಿ.ಮಂದಿರ ಕಟ್ಟಲು ಒಂದೂವರೆ ಸಾವಿರ ಕೋಟಿ ಹಣ ಸಂಗ್ರಹಿಸಿದ ಚಡ್ಡಿ.ಧರ್ಮ ರಕ್ಷಣೆಗೆ ಟೊಂಕ ಕಟ್ಟಿ ನಿಲ್ಲುವ ಚಡ್ಡಿ.ಕೆಲವೇ ಗಂಟೆಗಳಲ್ಲಿ 400 ವರ್ಷಗಳ ಹಳೆಯ ಕಟ್ಟಡ ಉರುಳಿಸಿದ ಚಡ್ಡಿ.ಅನ್ಯ ಧರ್ಮದ ಯುವಕರಿಂದ ಧರ್ಮದ ಹೆಣ್ಣು ಮಕ್ಕಳ ರಕ್ಷಣೆಗೆ ಬಡಿಗೆ ಇಡಿದು ನಿಲ್ಲುವ ಚಡ್ಡಿ.ಗೋವುಗಳ ರಕ್ಷಣೆಗೆ ಕತ್ತಿ ಹಿಡಿದು ನಿಲ್ಲುವ ಚಡ್ಡಿ.ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು ಎಂದು ಘೋಷಣೆ ಕೂಗುವ ಚಡ್ಡಿ.ದೇವಸ್ಥಾನದ ಕಲ್ಯಾಣಿಗಳನ್ನು…

  • ಮಕ್ಕಳನ್ನು ಮತ್ತವರ ಪೋಷಕರನ್ನು ಬಲೆಗೆ ಬೀಳಿಸುವ RSS ಖೆಡ್ಡಾ

    “….ಈ ಎಲ್ಲಾ ಅಭ್ಯಾಸಗಳನ್ನು ಮುಗಿಸಿಕೊಂಡ ಸಂಘ ಸೇವಕರನ್ನು ಈ ಮುಂದಿನ ಕೆಲಸಕಾರ್ಯಗಳಿಗೆ ಬಳಸಿಕೊಳ್ಳುತ್ತದೆ.‘ಕೇರಳದ ಯಾವುದಾದರೂ ಕ್ರೈಸ್ತ, ಮುಸ್ಲೀಂ ಜನ ವಿಭಾಗ ಹೆಚ್ಚಿರುವ ಅಥವಾ ಅವರದ್ದೇ ಆಡಳಿತವಿರುವ ವಿದ್ಯಾಲಯದೊಳಗೆ ನುಸುಳಿಕೊಳ್ಳುವುದು. ಆ ವಿದ್ಯಾಲಯದ ಹಿರಿಯ ಪ್ರಾಥಮಿಕ ಶಾಲೆಯ ಹಾಗೂ ಹೈಸ್ಕೂಲಿನ ತರಗತಿಗಳಿಗೆ ಹೋಗಿ ಪಾಠ ಮಾಡುತ್ತಲೇ ಒಂದೊಂದು ಮಾಯಾ ವಲಯದೊಳಗೆ ಮಕ್ಕಳನ್ನು ಬೀಳಿಸುವುದು. ಪ್ರತಿಯೊಂದು ತರಗತಿಯನ್ನು ಮುಗಿಸಿ ಹೊರ ಬರುವಾಗ ಮಕ್ಕಳ ಕೈಗಳಲ್ಲಿ ಅಡ್ರೆಸ್ ಬರೆಯುವ ಫಾರ್ಮ್ ಕೊಟ್ಟು ಅದನ್ನು ಭರ್ತಿ ಮಾಡಿಕೊಂಡು ತರುವಂತೆ ಹೇಳಿ ತಮ್ಮನ್ನು ಸಂಪರ್ಕಿಸಲು…

  • ಸಾಮಾಜಿಕ ಸ್ಥಿತಿಗಳನ್ನು ಪ್ರತಿಬಿಂಬಿಸುವ ಕರೂರ್ ದುರಂತ

    ತಮಿಳುನಾಡಿನ ಕರೂರ್ ನಲ್ಲಿ ನಡೆದ ವಿಜಯ್ ಪ್ರಚಾರ ರ್ಯಾಲಿಯಲ್ಲಿ 41 ಜನರು ಸಾವನ್ನಪ್ಪಿದ ದುರಂತ ಘಟನೆಯನ್ನು ಒಂದು ಸಾಮಾನ್ಯ ಅಪಘಾತ ಎಂಬಂತೆ ನೋಡಬಾರದು. ಇದು ಚಲನಚಿತ್ರ ತಾರೆಯರನ್ನು ದೇವರಂತೆ ಪೂಜಿಸುವ ಅಭಿಮಾನಿ ಸಂಸ್ಕೃತಿಯ ಅಂತಿಮ ಅವನತಿಯನ್ನು ಬಹಿರಂಗಪಡಿಸುತ್ತದೆ. ಈ ದುರಂತ ಘಟನೆಯು ಯುವ ಪೀಳಿಗೆಯ ‘ರಾಜಕೀಯ ರಹಿತ’ ಬೆಳವಣಿಗೆಯಿಂದ ಉದ್ಭವಿಸುವ ಆಳವಾಗಿ ಬೇರೂರಿರುವ ರಚನಾತ್ಮಕ ಸಮಸ್ಯೆಗಳನ್ನು ಬೆಳಕಿಗೆ ತಂದಿದೆ. ಈ ಘಟನೆ ನಮ್ಮ ಮುಂದೆ ಒಂದು ಪ್ರಮುಖ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ರಾಜಕೀಯ ಪಕ್ಷದ ಬೆಂಬಲಿಗರು ರಾಜಕೀಯ ಪ್ರಜ್ಞೆ…