ಲೇಖಕ: Siddaiah C

  • ಚಿಕಾಗೋ ನಗರದ ‘ಹೇಮಾರ್ಕೆಟ್ ಹುತಾತ್ಮರು’

    ಮೇ 4 ರಂದು, ಸ್ಥಳೀಯ ಹೋರಾಟಗಾರರು ವ್ಯಾಗನ್ನಿನ ಮೇಲೆ ನಿಂತು ಮಾಡುವ ಭಾಷಣಗಳನ್ನು ಕೇಳಲು ಸುಮಾರು 2,500 ಕಾರ್ಮಿಕರು ಪ್ಯಾಕಿಂಗ್ ಹೌಸ್ ಜಿಲ್ಲೆಯ ಹೇಮಾರ್ಕೆಟ್ ಚೌಕದಲ್ಲಿ ಒಟ್ಟುಗೂಡಿದರು. ರಾತ್ರಿ ಹತ್ತು ಗಂಟೆಯ ಕೆಲವು ನಿಮಿಷಗಳ ನಂತರ, ಚಿಕಾಗೋದಲ್ಲಿ ಜೋರು ಗಾಳಿ ಬೀಸಲಾರಂಭಿಸಿತು. ಮೊದಲ ಹನಿ ಮಳೆ ಬೀಳುತ್ತಿದ್ದಂತೆ, ಹೇಮಾರ್ಕೆಟ್ ಚೌಕದಲ್ಲಿ ಜನಸಮೂಹವು ಅಲ್ಲಿಂದ ಹೊರಡಲು ಪ್ರಾರಂಭಿಸಿತು. ಕಾರ್ಮಿಕ ನಾಯಕರು ಪೊಲೀಸರ ಕ್ರೌರ್ಯವನ್ನು ಖಂಡಿಸಿ, ಎಂಟು ಗಂಟೆಗಳ ದಿನದ ಬೇಡಿಕೆ ಬಗ್ಗೆ ಮಾತನಾಡುತ್ತಿದ್ದರು. ರಾತ್ರಿ ಹತ್ತು ಗಂಟೆಯ ಹೊತ್ತಿಗೆ…

  • ರಾಷ್ಟ್ರವನ್ನೇ ಬೆಚ್ಚಿಬೀಳಿಸಿದ ಭಯೋತ್ಪಾದಕ ದಾಳಿ

    ಮೋದಿ ಸರ್ಕಾರದ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸುತ್ತದೆ 2025ರ ಏಪ್ರಿಲ್ 22ರಂದು ಭಯೋತ್ಪಾದಕರ ಕ್ರೂರ ಕೃತ್ಯದಲ್ಲಿ 26 ಪ್ರವಾಸಿಗರನ್ನು ಭಯೋತ್ಪಾದಕರು ಕ್ರೂರವಾಗಿ ಗುಂಡಿಕ್ಕಿ ಕೊಂದಿದ್ದು ರಾಷ್ಟ್ರವನ್ನೇ ಬೆಚ್ಚಿಬೀಳಿಸಿದೆ. ಭಯೋತ್ಪಾದಕರ ದಾಳಿಯನ್ನು ಖಂಡಿಸಿ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದವು. ದಾಳಿಯಲ್ಲಿ ಮಡಿದವರಿಗೆ ಮುಂಬತ್ತಿ ಬೆಳಗುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಕಾಶ್ಮೀರದ ಜನರು ಈ ದಾಳಿಯನ್ನು ಖಂಡಿಸಿ ಕಣಿವೆಯಲ್ಲಿ ಬಂದ್ ನಡೆಸಿದರು. 35 ವರ್ಷಗಳಲ್ಲಿ ಮೊದಲ ಬಾರಿಗೆ ಕಾಶ್ಮೀರಿಗಳು ಭಯೋತ್ಪಾದಕ ದಾಳಿಯನ್ನು ಖಂಡಿಸಿ ಸಂಪೂರ್ಣ ಬಂದ್ ಪ್ರತಿಭಟನೆ ನಡೆಸಿದರು. ಈ…

  • ಚೀನಾದ ಮೇಲಿನ ದ್ವೇಷ ಸಾಧನೆ ವ್ಯಾಪಾರದಲ್ಲಿ ಲಾಭ ಸಂಪಾದನೆ

    ಚೀನಾ ದೇಶ ಭಾರತದ ಪರಮ ಶತ್ರು ಎಂದು ಬಿಜೆಪಿ ಮತ್ತು ಸಂಘಪರಿವಾರವು ಜನರ ನಡುವೆ ಪ್ರಚಾರ ಮಾಡುತ್ತಲೇ, ಚೀನಾದ ಜೊತೆಗಿನ ವ್ಯಾಪಾರ ವಹಿವಾಟು ನಡೆಯುವಂತೆ ನೋಡಿಕೊಂಡಿದ್ದಾರೆ. ಚೀನಾದಲ್ಲಿ ಭಾರತದ ಉತ್ಪನ್ನಗಳ ಮಾರಾಟ ಮತ್ತು ಭಾರತದಲ್ಲಿ ಚೀನಾ ಉತ್ಪನ್ನಗಳ ಮಾರಾಟ ನಡೆಯುತ್ತಿವೆ. ಭಾರತದ ಹಲವು ಉದ್ಯಮಗಳಲ್ಲಿ ಚೀನಾ ಮತ್ತು ಭಾರತದ ಬಂಡವಾಳಗಾರರ ಸಹಭಾಗಿತ್ವವಿದೆ. ಚೀನಾದಲ್ಲಿ ಭಾರತದ ಹೂಡಿಕೆ, ಭಾರತದಲ್ಲಿ ಚೀನಾ ಹೂಡಿಕೆಗಳಿವೆ. ಒಮ್ಮೆ ಬಾಬಾ ರಾಮ್ ದೇವ್ ‘ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿ’ ಎಂದು ಭಾರತೀಯರಿಗೆ ಕರೆಕೊಟ್ಟಿದ್ದರು. ಅದಾದ ಒಂದೆರೆಡು…

  • ಅಂದು ಪುಲ್ವಾಮ- ಹಲವು ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ; ಇಂದು ಪಹಲ್ಗಾಮ್- ಉತ್ತರ ಸಿಗುತ್ತದೆಯೇ?

    ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ ನಡೆದಿದೆ. 2025ರ ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಸನಿಹದಲ್ಲಿರುವ ಹುಲ್ಲುಗಾವಲಿನಲ್ಲಿ ನಡೆದ ಉಗ್ರರ ಗುಂಡಿನ ದಾಳಿಗೆ 28 ಪ್ರವಾಸಿಗರು ಬಲಿಯಾಗಿದ್ದಾರೆ. ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಬಲಿಯಾದವರಲ್ಲಿ ಇಬ್ಬರು ಕನ್ನಡಿಗರು, ಇಬ್ಬರು ವಿದೇಶಿಗರು ಎಂದು ವರದಿಯಾಗಿದೆ. ಈ ರೀತಿಯ ದಾಳಿಗಳು ನಡೆದಾಗ ಜನರಿಂದ, ರಾಜಕೀಯ ಪಕ್ಷಗಳ ನಾಯಕರಿಂದ ಮುಸ್ಲಿಂ  ಉಗ್ರವಾದಿಗಳು ಮತ್ತು ಪಾಕಿಸ್ತಾನದ ವಿರುದ್ದ ಆಕ್ರೋಶಗಳು ವ್ಯಕ್ತವಾಗುತ್ತವೆ. ಹಿಂದುತ್ವವಾದಿಗಳಿಂದ ಇದನ್ನು ಮುಸ್ಲಿಮರ ವಿರುದ್ದ ತಿರುಗಿಸುವ ಪ್ರಯತ್ನವೂ ನಡೆಯುತ್ತದೆ.…

  • ಸ್ಟಾರ್‌ ಲಿಂಕ್ ಸೇವೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಜಿಯೋ ಮತ್ತು ಏರ್‌ಟೆಲ್‌: ಅದರ ಜೊತೆಗಿನ ಒಪ್ಪಂದದ ಒಳಗುಟ್ಟೇನು?

    ಭಾರತೀಯ ದೂರಸಂಪರ್ಕ ವಲಯದಲ್ಲಿ ಇತ್ತೀಚಿನ ಒಪ್ಪಂದಗಳಿಗೆ ಭೂಮಿಕೆ ಏನಿದೆ? ಯಾವ ಆಧಾರದ ಮೇಲೆ, ಯಾರ ಪ್ರಯೋಜನಕ್ಕಾಗಿ ಈ ಒಪ್ಪಂದ ನಡೆಯಿತು? ಇದು ಯಾವ ಬೆಳವಣಿಗೆಗಳಿಗೆ ಕಾರಣವಾಗುತ್ತದೆ? ನಿನ್ನೆಯವರೆಗೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಕಂಪನಿಗಳು ಒಂದರ ನಂತರ ಒಂದರಂತೆ ಒಪ್ಪಂದಗಳನ್ನು ಮಾಡಿಕೊಳ್ಳುವುದರಲ್ಲಿನ ಒಳಗುಟ್ಟೇನು? ಇವು ಬಾಹ್ಯಾಕಾಶದ ಮೇಲಿನ ಏಕಸ್ವಾಮ್ಯಕ್ಕೆ ಕಾರಣವಾಗುತ್ತಿವೆಯೇ? ಹಾಗೇನಾದರೂ ನಡೆದರೆ, ರಾಷ್ಟ್ರೀಯ ಭದ್ರತೆ ಮತ್ತು ದೇಶದ ಸಾರ್ವಭೌಮತ್ವ ಎಂಬುದಕ್ಕೆ ಅರ್ಥವೇನಿದೆ? ಸ್ಟಾರ್‌ಲಿಂಕ್ ಜೊತೆ ಜಿಯೋ ಮತ್ತು ಏರ್‌ಟೆಲ್‌ನ ಒಪ್ಪಂದಗಳು ಎತ್ತಿರುವ ಪ್ರಶ್ನೆಗಳಿವು. ದೇಶದಲ್ಲಿ ಉಪಗ್ರಹ ಆಧಾರಿತ…

  • ಸ್ಮಾರ್ಟ್ ಮೀಟರ್  ಹಗರಣದ ಚರ್ಚೆಯೂ, ಮುಚ್ಚಿಟ್ಟ ಗ್ರಾಹಕರ ಸುಲಿಗೆಯ ನೀತಿಯೂ

    ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಗುತ್ತಿಗೆ ಹಗರಣ ದೊಡ್ಡ ಸುದ್ದಿಯಾಗಿದೆ. ರಾಜಕೀಯ ಪಕ್ಷಗಳು ಈ ಹಗರಣಗದ ಬಗ್ಗೆಯಷ್ಟೇ ಮಾತನಾಡುತ್ತಿವೆ. 2025-26ರ ರಾಜ್ಯ ಬಜೆಟ್ ಅಧಿವೇಶನದಲ್ಲಿ ಬಿಜೆಪಿ ನಾಯಕರೊಬ್ಬರು ಸ್ಮಾರ್ಟ್ ಮೀಟರ್ ಕುರಿತೇ 45 ನಿಮಷಗಳ ಕಾಲ ಮಾತನಾಡಿದರೂ, ಸ್ಮಾರ್ಟ್ ಮೀಟರ್ ಅಳವಡಿಕೆಯ ಉದ್ದೇಶವೇನು? ಆ ನಂತರ, ಗ್ರಾಹಕರು ಅನುಭವಿಸುವ ನೋವೇನು? ಕೃಷಿ ಪಂಪ್ ಸೆಟ್ ಹೊಂದಿರುವ ರೈತರ ಮತ್ತು ಕೃಷಿಯ ಮೇಲಾಗುವ ಪರಿಣಾಮಗಳೇನು? ಈ ಅಂಶಗಳ ಬಗ್ಗೆ ಏನೂ ಮಾತನಾಡಲಿಲ್ಲ. ಸಮವರ್ತಿ ಪಟ್ಟಿಯಲ್ಲಿರುವ ವಿದ್ಯುತ್ ಕ್ಷೇತ್ರದ ರಾಜ್ಯಗಳ ಹಕ್ಕನ್ನು…

  • ತನಿಖೆಯ ಹಾದಿಯಲ್ಲಿ ಸಾವಿನ ಸರಮಾಲೆಯನ್ನೇ ಸೃಷ್ಟಿಸಿದ ‘ವ್ಯಾಪಂ ಹಗರಣ’  

    ಚಿತ್ರ ಕೃಪೆ: ದಿ ಹಿಂದೂ ವೈದ್ಯಕೀಯ ಕೋರ್ಸ್‌ ಗಳ ಪ್ರವೇಶಕ್ಕಾಗಿ 2026ರ ಮೇ 3ರಂದು ನಡೆಸಲಾದ NEET ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ರದ್ದುಗೊಳಿಸಿ, ಮರುಪರೀಕ್ಷೆ ನಡೆಸುವುದಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಘೋಷಿಸಿದೆ. ಅಪಾರ ಒತ್ತಡ ಭರಿಸಿ, ಹಣ ವ್ಯಯಿಸಿ, ಪರೀಕ್ಷೆ ಬರೆದಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಕನಸಿನ ಗೋಪುರ ಕುಸಿದಿದ್ದು, ಭರವಸೆಗೆ ಭಂಗ ಉಂಟಾಗಿದೆ. ಈ ಸಂದರ್ಭದಲ್ಲಿ, ಮಧ್ಯಪ್ರದೇಶದಲ್ಲಿ 2013ರಲ್ಲಿ ಬೆಳಕಿಗೆ ಬಂದ Vyapam ಹಗರಣವನ್ನು ನೆನಪಿಸಿಕೊಳ್ಳುವುದು ಅಗತ್ಯ ಎನಿಸುತ್ತಿದೆ. ವ್ಯಾಪಂ ಹಗರಣಕ್ಕೆ ಸಂಬಂಧಿಸಿ ನಡೆದ ತನಿಖೆಯ…

  • ಕಲ್ಲಿದ್ದಲು ಹಗರಣದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಲೇ ಇಲ್ಲ

    2012ರಲ್ಲಿ ಮನಮೋಹನ್ ಸಿಂಗ್ ಸರ್ಕಾರವನ್ನು ಅಲುಗಾಡಿಸಿದ ಬಹುಕೋಟಿ ಮೌಲ್ಯದ ಹಗರಣಗಳಲ್ಲಿ ಕಲ್ಲಿದ್ದಲು ಹಗರಣ ಮತ್ತು 2ಜಿ ಹಗರಣ ಮೊದಲೆರಡು ಸ್ಥಾನಲ್ಲಿದ್ದವು. ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಕಂಪನಿಗಳಿಗೆ ಕಲ್ಲಿದ್ದಲು ಬ್ಲಾಕ್‌ಗಳನ್ನು ಹೇಗೆ ನೀಡಲಾಯಿತು ಎಂಬುದರ ಕುರಿತಾಗಿ 2012ರಲ್ಲಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿ ಬಂದ ನಂತರ ಕಲ್ಲಿದ್ದಲು ಹಗರಣ ರಾಷ್ಟ್ರೀಯ ದೊಡ್ಡ ಹಗರಣವಾಗಿ ಮಾರ್ಪಟ್ಟಿದೆ. 2004 ಮತ್ತು 2009ರ ನಡುವೆ ಪಾರದರ್ಶಕವಲ್ಲದ ರೀತಿಯಲ್ಲಿ 194 ಕಲ್ಲಿದ್ದಲು ಬ್ಲಾಕ್‌ಗಳನ್ನು ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಖಾಸಗಿ…

  • ಹೋರಾಟಕ್ಕಿಳಿದ ಬೆಂಗಳೂರಿನ ಟೆಕ್ಕಿಗಳು

    “ಆರೋಗ್ಯಕರ ಕೆಲಸ-ಜೀವನ ಸಮತೋಲನ ಪ್ರತಿಯೊಬ್ಬ ನೌಕರನ ಹಕ್ಕು” ಸಾಫ್ಟ್‌ವೇರ್ ಉದ್ಯೋಗಿಗಳೆಂದರೆ, ಅವರಿಗೇನು ಕಡಿಮೆ ಇದೆ? ಉತ್ತಮ ಸಂಬಳ ಸಿಗುತ್ತೆ, ಹವಾನಿಯಂತ್ರಣ ಕೊಠಡಿಗಳಲ್ಲಿ ಆರಾಮವಾಗಿ ಕೆಲಸ ಮಾಡುತ್ತಾರೆ, ದುಬಾರಿ ಕಾರುಗಳಲ್ಲಿ ಓಡಾಡುತ್ತಾರೆ, ಉನ್ನತ ದರ್ಜೆಯ ಜೀವನ ನಡೆಸುತ್ತಾರೆ ಎಂದೆಲ್ಲಾ ಹಲವರು ಭಾವಿಸುತ್ತಾರೆ. ಆದರೆ, “ನಾವು ಮನುಷ್ಯರು… ಕಂಪನಿಗಳ ಗುಲಾಮರಲ್ಲ”,  “ಆರೋಗ್ಯಕರ ಕೆಲಸ-ಜೀವನ ಸಮತೋಲನ ಪ್ರತಿಯೊಬ್ಬ ನೌಕರನ ಹಕ್ಕು” ಎಂಬ ಘೋಷಣೆಗಳೊಂದಿಗೆ ಟೆಕ್ಕಿಗಳೂ ಹೋರಾಟಕ್ಕಿಳಿದಿದ್ದಾರೆ. ಎಲ್ಲಾ ಕೈಗಾರಿಕೆಗಳಂತೆ ಐಟಿ ಕ್ಷೇತ್ರದಲ್ಲಿಯೂ ಕಾರ್ಮಿಕ ಕಾನೂನುಗಳನ್ನು ಜಾರಿಗೆ ತರಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಕೆಲವರು…

  • ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ: 96ನೇ ಸ್ಥಾನದಲ್ಲಿ ಭಾರತ

    ಮೋದಿಯವರ ‘ಭ್ರಷ್ಟಾಚಾರ ಮುಕ್ತ ಭಾರತ’ದ ವಾಗ್ದಾನ ಏನಾಯ್ತು? ಫೆಬ್ರವರಿ 11, 2025 ರಂದು ಬಿಡುಗಡೆಯಾದ ಟ್ರಾನ್ಸ್‌ ಪರೆನ್ಸಿ ಇಂಟರ್‌ ನ್ಯಾಷನಲ್ ವರದಿಯ ಪ್ರಕಾರ, 2024ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (CPI)ದಲ್ಲಿ ಭಾರತವು 180 ದೇಶಗಳ ಪಟ್ಟಿಯಲ್ಲಿ 96ನೇ ಸ್ಥಾನದಲ್ಲಿದೆ. 2014ರ ಚುನಾವಣೆಯಲ್ಲಿ ಬಿಜೆಪಿ ಶೇ. 31 ರಷ್ಟು ಮತ ಪಡೆದು ನರೇಂದ್ರ ಮೋದಿ ಪ್ರಧಾನಿಯಾಗಲು ದೇಶದಲ್ಲಿನ ಅಂದಿನ ಭ್ರಷ್ಟಾಚಾರವೂ ಒಂದು ಕಾರಣವಾಗಿತ್ತು. ಅಂದು, ಭ್ರಷ್ಟಾಚಾರದ ವಿಷಯ ಸಂಘಪರಿವಾರದ ಚುನಾವಣಾ ಪ್ರಚಾರದ ಒಂದು ಅಸ್ತ್ರವಾಗಿತ್ತು. 2014ರಲ್ಲಿ 175 ದೇಶಗಳ…