ಲೇಖಕ: Siddaiah C

  • Madarsa: ಮದರಸಾ ಪಾಠಶಾಲೆ -ಅದು ಅವರ ಹಕ್ಕು

    ಮದರಸಾ ಪಾಠಶಾಲೆಗಳು ಜಾತ್ಯಾತೀತ ತತ್ವಗಳಿಗೆ ವಿರುದ್ಧವಾಗಿವೆ ಎಂದು ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ತಳ್ಳಿಹಾಕಿದೆ. ಮುಸ್ಲಿಮರ ಶಿಕ್ಷಣ ಸಂಸ್ಥೆಗಳನ್ನು ಅನುಮಾನದಿಂದ ನೋಡುವ ಪರಿಪಾಠವಿರುವ ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ಈ ತೀರ್ಪು ಮತಾಂಧರಿಗೆ ಕಪಾಳಮೋಕ್ಷವಾಗಿದೆ. ಒಂದು ನಿರ್ದಿಷ್ಟ ಧರ್ಮವು ಶಾಲೆಗಳನ್ನು ನಡೆಸಬಾರದು ಎಂದು ಪ್ರತಿಪಾದಿಸಲು ಪ್ರಾರಂಭಿಸಿದರೆ, ಅದು ಕ್ರಮೇಣ ಇತರ ಧರ್ಮಗಳು ನಡೆಸುವ ಶಾಲೆಗಳಿಗೂ ಅನ್ವಯಿಸುವ ಅಪಾಯವಿದೆ. ಹಿಂದೂ ಸಂಸ್ಥೆಗಳೂ ಶಾಲೆಗಳನ್ನು ನಡೆಸುತ್ತವೆ. ಆರ್‌ಎಸ್‌ಎಸ್ ಸರಸ್ವತಿ ಶಿಶು ವಿದ್ಯಾಮಂದಿರದಂತಹ…

  • ವಕ್ಫ್ ಆಸ್ತಿ ವಿವಾದ: ಯಾಕಿಷ್ಟು ಗದ್ದಲ?

    ಬಿಜೆಪಿ ಹೊಸ ಹೊಸ ಕುತಂತ್ರದ ಬಲೆ ಬೀಸುವ ಮೂಲಕ ಜನರನ್ನು ಮರುಳು ಮಾಡುತ್ತಲೇ ಇರುವುದನ್ನು ನೋಡುತ್ತಲೇ ಬಂದಿದ್ದೇವೆ. ಇಂದು ವಕ್ಪ್ ಆಸ್ತಿ ವಿಷಯದಲ್ಲಿ ಮುಸ್ಲೀಮರು ಹಿಂದೂಗಳ ಆಸ್ತಿ ಕಸಿದುಕೊಳ್ಳುತ್ತಿದ್ದಾರೆ ಎಂಬ ಮತ್ತೊಂದು ಕುತಂತ್ರದ ಬಲೆ ಬೀಸಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಕ್ಪ್ ಬೋರ್ಡ್ ತಿದ್ದುಪಡಿ ಮಸೂದೆ ತರಲು ಮುಂದಾಗಿರುವ ಈ ಸಂದರ್ಭದಲ್ಲಿ, ಇದಕ್ಕೆ ಪೂರಕವಾಗಿ ಬಹುಸಂಖ್ಯಾತ ಸಮುದಾಯದ ಜನರ ಬೆಂಬಲ ಪಡೆಯಲು, ಕರ್ನಾಟಕದ ವಕ್ಪ್ ಮಂಡಳಿಯು ಹಿಂದೂ ರೈತರ ಮತ್ತು ಮಂದಿರಗಳ ಭೂಮಿ ಕಸಿದುಕೊಳ್ಳುತ್ತಿದೆ ಎಂದು…

  • “ಕಾಯಿರಿ, ಯೋಚಿಸಿ, ನಂತರ ಪ್ರತಿಕ್ರಿಯಿಸಿ”

    ಡಿಜಿಟಲ್  ವಂಚನೆಗಳ ಬಗ್ಗೆ ಮೋದಿಯವರ ‘ಮೂರು ಮಂತ್ರಗಳು’!! ದೇಶದಲ್ಲಿ ಡಿಜಿಟಲ್  ವಂಚನೆಗಳು ಹೆಗ್ಗಿಲ್ಲದೆ ನಡೆಯುತ್ತಿವೆ. ಲಕ್ಷಾಂತರ ಜನರು ತಮ್ಮ ಹಣ  ಹಾಗೂ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ.  ಇಂತಹ ವಂಚನೆ ದಿನೇ ದಿನೇ ಹೆಚ್ಚುತ್ತಲೇ ಇವೆ. ಸೈಬರ್ ಅಪರಾಧಿಗಳು  ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಭಾರತದಲ್ಲಿ ರೂ. 1770 ಕೋಟಿವರೆಗೆ ವಂಚಿಸಿದ್ದಾರೆ. ದಿನವೊಂದರಲ್ಲಿ ಸರಾಸರಿ 6,000 ಕ್ಕೂ ಹೆಚ್ಚು ಸೈಬರ್ ಅಪರಾಧಗಳ ದೂರುಗಳನ್ನು I4C ಸ್ವೀಕರಿಸುತ್ತಿದೆ. ಇಂತಹ ವಂಚಕರ ವಿರುದ್ದ ಕಠಿಣ ಕ್ರಮ ತೆಗೆದುಕೊಂಡು, ಡಿಜಿಟಲ್  ವಂಚನೆಯಿಂದ ಪ್ರಜೆಗಳನ್ನು…

  • ಪ್ರಧಾನ ಮಂತ್ರಿ ಕೌಶಲ ವಿಕಾಸ್ ಯೋಜನೆ

    ‘ಕೌಶಲ’ ಕೊಟ್ಟಿದ್ದೇನೆ, ಉದ್ಯೋಗ ನೀನೇ ಹುಡುಕಿಕೊಳ್ಳಿ ಆಧುನಿಕ-ದಿನದ ಮಾರುಕಟ್ಟೆ ಬೇಡಿಕೆಗಳಿಗೆ ಅನುಗುಣವಾಗಿ ನುರಿತ ಉದ್ಯೋಗಿಗಳು ಮತ್ತು ನಾಯಕರ ಅಗತ್ಯವಿದೆ. ಅಬ್ಬರದ  ಪ್ರಚಾರ ಪಡೆದಿರುವ ಮತ್ತು ಹಿಂದೆಂದೂ ಮಾಡದ ಸಾಧನೆ ಎಂದು ಬಿಂಬಿಸಿಕೊಳ್ಳಲು ಹೊರಟಿರುವ ‘ಸ್ಕಿಲ್ ಇಂಡಿಯಾ’ ಯೋಜನೆ ಇದಕ್ಕೆ ಎಷ್ಟರ ಮಟ್ಟಿಗೆ ಸಹಕಾರಿಯಾಗಿದೆ ಎಂಬುದೇ ಪ್ರಶ್ನೆ. ತರಬೇತಿ ಪಡೆದ ವ್ಯಕ್ತಿಗಳಿಗೆ ಉದ್ಯೋಗದ ಗುರಿಗಳನ್ನು ಸಾಧಿಸಲು ಸಾಧ್ಯವಾಗಬೇಕಲ್ಲವೇ? ಆದರೆ, ಇದು ಆಗುತ್ತಿಲ್ಲ. ತರಬೇತಿ ಪಡೆದ ಬಹುತೇಕ ಜನರಿಗೆ ಅಂತಹ ಕ್ಷೇತ್ರಗಳಲ್ಲಿ ಉದ್ಯೋಗಗಳೇ ಸಿಗುತ್ತಿಲ್ಲ. ಇದನ್ನು ಕಂಟ್ರೋಲರ್ ಮತ್ತು ಆಡಿಟರ್…

  • ಕರ್ನಾಟಕ ರಾಜ್ಯೋತ್ಸವ: ರಾಜ್ಯದ ನೆಲ, ಜಲ, ಭಾಷೆ, ಸಂಪತ್ತನ್ನು ರಕ್ಷಿಸಲು ಪಣ ತೊಡೋಣ

    ರಾಜ್ಯೋತ್ಸವ ಆಚರಣೆ ಎಂದರೆ ಬರೀ ಸಂಭ್ರಮ ಸಡಗರಗಳಿಗಷ್ಟೇ ಸೀಮಿತವಾಗಬಾರದಲ್ಲವೇ? ರಾಜ್ಯದ ನೆಲ, ಜಲ, ಕನ್ನಡ ಸೇರಿದಂತೆ ಈ ನೆಲಮೂಲದ ಹಲವು ಭಾಷೆಗಳು, ಇಲ್ಲಿನ ಸಂಸ್ಕೃತಿ, ರಾಜ್ಯದ ಸಂಪತ್ತು, ರೈತರ ಭೂಮಿ, ಸಾರ್ವಜನಿಕ ಉದ್ಯಮಗಳು,… ಇವುಗಳ ರಕ್ಷಣೆಗೆ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಪಣ ತೊಡಬೇಕಲ್ಲವೇ? ಒಕ್ಕೂಟ ವ್ಯವಸ್ಥೆಯಲ್ಲಿ ಸಂವಿಧಾನ ನೀಡಿರುವ ರಾಜ್ಯಗಳ ಹಕ್ಕುಗಳನ್ನು ಕಸಿದು ಕೊಳ್ಳುತ್ತಿರುವ ಒಕ್ಕೂಟ ಸರ್ಕಾರದ ನೀತಿಗಳ ಕುರಿತು ರಾಜ್ಯದ ಜನರನ್ನು ಎಚ್ಚರಿಸುವ ಕೆಲಸ ನಡೆಯಬೇಕಲ್ಲವೇ? ಒಂದು ದೇಶ-ಒಂದು ಭಾಷೆ ಹೆಸರಿನಲ್ಲಿ ಹಿಂದಿ ಭಾಷೆಯನ್ನು ಹೇರುವುದರ…

  • ಮೋದಿ ಭರವಸೆಯಂತೆ 2022ರೊಳಗೆ ಎಲ್ಲರಿಗೂ ವಸತಿ ದೊರಕಿತೆ?

    ಮೋದಿ ಸರ್ಕಾರ 11 ವರ್ಷಗಳ ಆಡಳಿತ ಪೂರೈಸಿದ ಸಂದರ್ಭದಲ್ಲಿ, ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’ (PMAY) ಅಡಿಯಲ್ಲಿ ಒಟ್ಟು ಸುಮಾರು 4 ಕೋಟಿ 20 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ, 2014ರಲ್ಲಿ ಇದೇ ಸರ್ಕಾರ ಹೇಳಿದ್ದು “2022ರ ವೇಳೆಗೆ ಎಲ್ಲರಿಗೂ ಕೈಗೆಟಕುವ ದರದಲ್ಲಿ ವಸತಿ ಒದಗಿಸುತ್ತೇವೆ” ಎಂದು. ಇದನ್ನು “ಮೋದಿ ಮನೆ ಇಲ್ಲದ ಎಲ್ಲರಿಗೂ ಮನೆ ಕಟ್ಟಿಸಿಕೊಡುತ್ತಾರೆ” ಎಂದೇ ಪ್ರಚಾರ ಮಾಡಿದರು. ಮನೆ ಇಲ್ಲದ ಕೋಟ್ಯಾಂತರ ಕುಟುಂಬಗಳು ಸ್ವಂತ ಮನೆ ಹೊಂದುವ ಕನಸು ಕಂಡರು.…

  • ಉಜ್ವಲ ಯೋಜನೆ: PMUY

    ಉಚಿತ ಸಂಪರ್ಕವಷ್ಟೆ, ಉಚಿತ ಅನಿಲವಲ್ಲ   “ನೋಡಿ ಇಲ್ಲಿ, ಹಳ್ಳಿಗಳಲ್ಲಿ ಬಡ ಮಹಿಳೆಯರು ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದಾರೆ. ಸೌದೆಯ ಹೊಗೆ ಮಹಿಳೆಯರ ಕಣ್ಣುಗಳಲ್ಲಿ ನೀರು ಸುರಿಸುತ್ತಿದೆ. ಈ ಬಡ ಮಹಿಳೆಯರಿಗೆ ಸಬ್ಸಿಡಿ ದರದಲ್ಲಿ ಅಡುಗೆ ಅನಿಲ ಕೊಡಬೇಕಿದೆ. ಉಳ್ಳವರು ತಾವು ಪಡೆಯುತ್ತಿರುವ ಅಡುಗೆ ಅನಿಲದ ಸಬ್ಸಿಡಿಯನ್ನು ಬಿಟ್ಟುಕೊಡಿ” ಇದು ಮೋದಿ ಸರ್ಕಾರದ ‘ಗಿವ್ ಇಟ್ ಅಪ್’ ಎಂಬ ಕರೆಗೆ ಸ್ಪಂದಿಸುವಂತೆ ‘ಉಳ್ಳವರಿಗೆ’(?) ಮಾಡಿದ ಕರೆಯ ಒಂದು ಜಾಹಿರಾತು. ಪ್ರಧಾನ್ ಮಂತ್ರಿ ಉಜ್ವಲ ಯೋಜನೆ(PMUY) ಯ ಜಾಹಿರಾತು…

  • ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆ

    ಹಾಲು ಕರೆಯಲು ಪಾತ್ರೆ ಬಂತು, ಹಾಲು ಕೊಡುವ ಹಸುವೇ ಇಲ್ಲ! ‘ಭಾರತದ ಕಟ್ಟಕಡೆಯ ನಾಗರಿಕನಿಗೂ ಆರ್ಥಿಕ ಸೇವೆ ಸಿಗುವಂತಾಗಲು ಮತ್ತು ದೇಶದ ಆರ್ಥಿಕ ವಾಹಿನಿಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ಸಲುವಾಗಿ’ ಎಂಬ ಘೋಷಣೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ‘ಪ್ರಧಾನ ಮಂತ್ರಿ ಜನ್ ಧನ್ ಯೋಜನೆ’ಯನ್ನು ಆಗಸ್ಟ್ 15, 2014 ರಂದು  ಘೋಷಿಸಿದರು, ಆಗಸ್ಟ್ 24, 2014 ರಂದು ಇದು ಜಾರಿಗೆ ಬಂತು. ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆ ಜಾರಿಗೆ ತರುವ ಮೂಲಕ ದೇಶದ ಎಲ್ಲಾ ಬಡವರೂ ಬ್ಯಾಂಕ್…

  • mgnrega: ನರೇಗಾ: 6 ತಿಂಗಳಲ್ಲಿ 84 ಲಕ್ಷ ಜನರನ್ನು ತೆಗೆದುಹಾಕಲಾಗಿದೆ!

    *ಆರು ತಿಂಗಳಲ್ಲಿ 84.8 ಲಕ್ಷ ಜನರನ್ನು ತೆಗೆದುಹಾಕಲಾಗಿದೆ. *2022-23 ಮತ್ತು 2023-24 ರ ಆರ್ಥಿಕ ವರ್ಷಗಳಲ್ಲಿ ಒಟ್ಟು 8 ಕೋಟಿ ಜನರನ್ನು ತೆಗೆದುಹಾಕಲಾಗಿದೆ. *ವೈಯಕ್ತಿಕ ಕೆಲಸದ ದಿನಗಳನ್ನು ಕಡಿಮೆ ಮಾಡಲಾಗಿದೆ *ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯಲ್ಲಿ ಹೆಚ್ಚಿನ ಸಮಸ್ಯೆಗಳು *ಲಿಬ್  ಟೆಕ್ ವರದಿಯಿಂದ ಬಹಿರಂಗ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಉದ್ಯೋಗ ಖಾತ್ರಿ ಯೋಜನೆ ಮೇಲೆ ದಾಳಿ ನಡೆಯುತ್ತಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA)ಯಲ್ಲಿ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (ABPS)…

  • ಜಾಗತಿಕ ಹಸಿವಿನ ಸೂಚ್ಯಂಕ: 127 ದೇಶಗಳಲ್ಲಿ 105ನೇ ಸ್ಥಾನದಲ್ಲಿ ಭಾರತ

    ಹತ್ತು ವರ್ಷಗಳ ತಮ್ಮ ಆಡಳಿತದಲ್ಲಿ ದೇಶ ಹಾಗಾಗಿದೆ, ಹೀಗಾಗಿದೆ ಎಂದು ಪ್ರಧಾನಿ ಮೋದಿ, ಬಿಜೆಪಿ, ಮತ್ತವರ ಮಂದಿಮಾಗದರು ದೇಶ ವಿದೇಶಗಳಲ್ಲಿ ಕೊಚ್ಚಿಕೊಳ್ಳುತ್ತಿರುವ ಸಂದರ್ಭದಲ್ಲಿ, 2024ನೇ ವರ್ಷಕ್ಕೆ ಪ್ರಕಟಿಸಿದ ಜಾಗತಿಕ ಹಸಿವಿನ ಸೂಚ್ಯಂಕ (ಗ್ಲೋಬಲ್ ಹಂಗರ್ ಇಂಡೆಕ್ಸ್- GHI)ವು ಅದೆಲ್ಲವೂ ಮಾತಿನ ಆಡಂಬರ ಎಂಬುದನ್ನು ತೋರಿಸಿದೆ. ಒಟ್ಟು 127 ದೇಶಗಳಲ್ಲಿ ಭಾರತ 105ನೇ ಸ್ಥಾನದಲ್ಲಿ ನಿಂತಿದೆ. ನೆರೆಯ ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಮ್ಯಾನ್ಮಾರ್ ದೇಶಗಳಿಗಿಂತಲೂ ಭಾರತ ಹಿಂದುಳಿದಿದೆ. 28, ಅಕ್ಟೋಬರ್ 2024; 2024ನೇ ವರ್ಷಕ್ಕೆ ಜಾಗತಿಕ ಹಸಿವಿನ ಸೂಚ್ಯಂಕ…