ವರ್ಗ: ಅವಿಭಾಗೀಕೃತ

  • ತಿರುಪತಿ ಲಡ್ಡು ಕಲಬೆರಕೆ:

    ಭಕ್ತರ ಭಾವನೆಗಳ ಜೊತೆ ಆಟವಾಡುವುದು ಬೇಡ, ನಿಜ ಏನೆಂದು ತಿಳಿಯಬೇಕಿದೆ ತಿರುಮಲ ಲಡ್ಡುಗಳ ತಯ್ಯಾರಿಕೆಗೆ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಲಾಗಿದೆ ಎಂಬ ವರದಿಯು ಕೋಟ್ಯಂತರ ತಿರುಮಲ ಭಕ್ತರನ್ನು ತೀವ್ರ ಚಿಂತೆಗೀಡುಮಾಡಿದೆ. ಲಡ್ಡು ಜತೆಗೆ ಟಿಟಿಡಿಯಲ್ಲಿ ನಡೆಯುತ್ತಿರುವ ಹಲವು ಭ್ರಷ್ಟಾಚಾರ, ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಟಿಟಿಡಿಯಲ್ಲಿ ಹಲವು ಅಕ್ರಮಗಳು ನಡೆಯುತ್ತಿದ್ದರೆ ಆ ಮಂಡಳಿಯ ಸದಸ್ಯರಾಗಿರುವ ಬಿಜೆಪಿ ನಾಯಕರು ಏನು ಮಾಡುತ್ತಿದ್ದರು? ಭಕ್ತರಿಗೆ ಬೇಕಾಗಿರುವುದು ಮತಾಂಧತೆ ಅಲ್ಲ. ರಾಜಕೀಯ ನಾಯಕರ ಸವಾಲುಗಳು,…

  • ಪ್ರಣಯ್ ರಾಯ್ ಪ್ರಕರಣವನ್ನು ಮುಕ್ತಾಯಗೊಳಿಸಿದ ಸಿಬಿಐ:

    ಮೋದಿ ಸರ್ಕಾರದಿಂದ ತನಿಖಾ ಸಂಸ್ಥೆಗಳ ದುರುಪಯೋಗದ ಇನ್ನೊಂದು ನಿದರ್ಶನ ಎನ್‌ ಡಿಟಿವಿಯ ಮಾಜಿ ಪ್ರವರ್ತಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ವಿರುದ್ದ 2017ರಲ್ಲಿ ದಾಖಲಾಗಿದ್ದ ಪ್ರಕರಣವನ್ನು ಸಿಬಿಐ 2024ರ ಅಕ್ಟೋಬರ್ ಒಂದರಂದು ಮುಕ್ತಾಯಗೊಳಿಸಿದೆ. ಏಳು ವರ್ಷಗಳ ಸುದೀರ್ಘ ತನಿಖೆಯು ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ ಸಿಬಿಐಗೆ ಈ ಕ್ರಮವು ಅನಿವಾರ್ಯವಾಯಿತು. ಪ್ರಕರಣದ ಮುಕ್ತಾಯ ವರದಿಯಲ್ಲಿ ಸಿಬಿಐ ಅಧಿಕಾರಿಗಳು ಇದನ್ನೇ ಉಲ್ಲೇಖಿಸಿದ್ದಾರೆ. ಈ ಪ್ರಕರಣವು ಆಡಳಿತಾರೂಢ ಬಿಜೆಪಿಯು ತನಿಖಾ ಸಂಸ್ಥೆಗಳನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದಕ್ಕೆ ಇತ್ತೀಚಿನ ಉದಾಹರಣೆಯಾಗಿದೆ. ನರೇಂದ್ರ…

  • ಹೈದರಾಬಾದ್ ವಿಮೋಚನೆ: ನಿಜವಾಗಿ ನಡೆದಿದ್ದೇನು?

    ಇದೇ ಸೆಪ್ಟೆಂಬರ್ 17ರಂದು ಕಾಂಗ್ರೆಸ್ ನೇತೃತ್ವದಲ್ಲಿನ ಕರ್ನಾಟಕ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ “ವಿಮೋಚನಾ ದಿನ”ವನ್ನಾಗಿ ಆಚರಿಸಿತು. ರಾಜ್ಯದ ಮುಖ್ಯ ಮಂತ್ರಿಯಾದಿಯಾಗಿ ಹಲವು ಸಚಿವರು, ಶಾಸಕರು, ಸಂಸದರು ಕಲ್ಯಾಣ ಕರ್ನಾಟಕದ ಹಲವು ಪ್ರದೇಶಗಳಲ್ಲಿ ವಿಮೋಚನಾ ದಿನದಂದು ಸಭೆ ಸಮಾರಾಂಭಗಳಲ್ಲಿ ಭಾಗಿಯಾಗಿದ್ದರು.   ಬಿಜೆಪಿಯು ಎರಡು ತೆಲುಗು ರಾಜ್ಯಗಳಲ್ಲಿ ತನ್ನ ಅನುಯಾಯಿಗಳು ಬಿಡುಗಡೆ ಮಾಡಿದ “ರಜಾಕಾರ” ಎಂಬ ತೆಲುಗು ಚಲನಚಿತ್ರವನ್ನು ವ್ಯಾಪಕವಾಗಿ ಪ್ರಚಾರ ಮಾಡುವ ಮೂಲಕ ಅಂದಿನ ಸಶಸ್ತ್ರ ರೈತರ ಹೋರಾಟವನ್ನು ಕೋಮು ಘರ್ಷಣೆ ಎಂದು ಬಿಂಬಿಸಲು…

  • Toyota workers ‘ಟೊಯೋಟ’ ಎಂಬ ರಾಕ್ಷಸನ ದವಡೆಯಲ್ಲಿ ಜೀವ ಬಿಡುತ್ತಿರುವ ಕಾರ್ಮಿಕರು

    ‘ಐಕ್ಯರಂಗ’ (ಇಂದಿನ ‘ಜನಶಕ್ತಿ’) ವಾರ ಪತ್ರಿಕೆಯ ಫೆಬ್ರವರಿ 24, 2002 ರ ಸಂಚಿಕೆಯಲ್ಲಿ ಪ್ರಕಟವಾದ ನನ್ನದೊಂದು ಲೇಖನ. ಹೊಸ ವರ್ಷ ಕಾರ್ಮಿಕರ ಪಾಲಿಗೆ ಹೊಸ ಭರವಸೆ ತರಲಿಲ್ಲ. ಮತ್ತದೇ ಆತಂಕ. ಅದೇ ಭಯ. ಅದೇ ಅತಂತ್ರ ಸ್ಥಿತಿ. ಅದೇ ನೋವು ನರಳುವಿಕೆಯಿಂದಲೇ ಕೆಲಸ ಮಾಡಬೇಕಾದ ಒತ್ತಡ. ಹೊಸ ವರ್ಷದಲ್ಲಿ ಈ ಸಂಕಟಗಳು ಮತ್ತಷ್ಟು ಹೆಚ್ಚುವ ಬೀತಿ. ಹೊಸ ವರ್ಷವನ್ನು ಹೊಸ ಹರುಷದೊಂದಿಗೆ ಸ್ವಾಗತಿಸಬೇಕು ಅಂದುಕೊಂಡರೂ ಅದು ಸಾಧ್ಯವಾಗುತ್ತಿಲ್ಲ. ನಾಳೆಗಳ ಕುರಿತು ಸುಂದರ ಕನಸುಗಳನ್ನು ಕಂಡಿದ್ದ ಯುವ ಮನಸ್ಸುಗಳಿಗೆ…

  • LIC -ಎಲ್ ಐ ಸಿ: ಜನರ ಉಳಿತಾಯದ ಮೇಲೆ ಸರ್ಕಾರವೇ ನಿಯಂತ್ರಣವನ್ನು ಹೊಂದಿರಬೇಕು ಎಂಬುದೇ ಇದರ ಸ್ಥಾಪನೆಯ ಗುರಿ

    ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ವಿಶ್ವದ ಒಂದು ವಿಶಿಷ್ಟವಾದ ವಿಮಾ ಸಂಸ್ಥೆಯಾಗಿದೆ. ಎಲ್ಐಸಿಯನ್ನು ಸ್ಥಾಪಿಸುವಾಗ ನೀತಿ ನಿರೂಪಕರು “ಅಪಾಯದ ವಿರುದ್ಧ ಸುರಕ್ಷಿತ ವಿಮೆಯನ್ನು ಒದಗಿಸಿ ಮತ್ತು ಅದೇ ಸಮಯದಲ್ಲಿ, ಜನಸ್ನೇಹಿ ಉಳಿತಾಯ ಸಾಧನವನ್ನು ಒದಗಿಸಿ” ಎಂಬ ಎರಡು ಉದ್ದೇಶಗಳನ್ನು ಹೊಂದಿದ್ದರು. ಆದರೆ, ಇಂದಿನ ಪ್ರಭುತ್ವ ವಿಮಾ ವಲಯದಲ್ಲಿ ಸ್ವದೇಶಿ ಮತ್ತು ವಿದೇಶಿ ಖಾಸಗಿ ಸಂಸ್ಥೆಗಳಿಗೆ ಅವಕಾಶ ಮಾಡಿಕೊಡುವ ಮೂಲಕ ನೀತಿ ನಿರೂಪಕರ ಆಶಯಗಳಿಗೆ ವಿರುದ್ದವಾಗಿ ನಡೆದುಕೊಳ್ಳುತ್ತಿದೆ. ಸಾಲದೆಂಬಂತೆ ಎಲ್ ಐಸಿ ಯ ಷೇರು ಮತ್ತು…

  • ಕನ್ವರ್  ಯಾತ್ರೆ: ವಿಭಜಿಸುವ ಕೆಲಸ ಬಹಿರಂಗವಾಗಿಯೇ ಪ್ರಾರಂಭವಾಗಿದೆ

    ಬಿಜೆಪಿ ಆಡಳಿತದ ಉತ್ತರಪ್ರದೇಶದಲ್ಲಿ ಈಗ ಪ್ರತ್ಯಕ್ಷವಾಗಿಯೇ ಅಲ್ಪಸಂಖ್ಯಾತರ ಮೇಳೆ ದಾಳಿ ಪ್ರಾರಂಭವಾಗಿದೆ. ಧರ್ಮದ ಹೆಸರಿನಲ್ಲಿ ವಿಭಜಿಸುವ ಕೆಲಸವೂ ಬಹಿರಂಗವಾಗಿಯೇ ಪ್ರಾರಂಭವಾಗಿದೆ. ನಿನ್ನ ಹೆಸರೇನು? ಅದನ್ನು ಬೋರ್ಡ್ ನಲ್ಲಿ ಬರೆದು ಕುತ್ತಿಗೆಗೆ ನೇತುಹಾಕಿಕೊ ಎನ್ನುತ್ತಾರೆ ಅವರು. ಅಂದಿನ ಹಿಟ್ಲರ್, ಮುಸೊಲಿನಿಯ ಹಾದಿಯನ್ನು ಅನುಸರಿಸುತ್ತ ಇಂದು ಉತ್ತರಪ್ರದೇಶ ರಾಜ್ಯದ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ನಿರಂಕುಶಾಧಿಕಾರಿಯಾಗಿ ಜನರ ಒಗ್ಗಟ್ಟನ್ನು ತುಂಡರಿಸುತ್ತಿದ್ದಾರೆ. ಮನುಷ್ಯರನ್ನು ಧರ್ಮದ ಆದಾರದಲ್ಲಿ ವಿಭಜಿಸಿ ಗಲಭೆ ಎಬ್ಬಿಸಲು ಪ್ರಜಾಪ್ರಭುತ್ವ ದೇಶದಲ್ಲಿ ನಿಸ್ಸಂಶಯವಾಗಿ ಬಾಗಿಲುಗಳು ತೆರೆದುಕೊಳ್ಳುತ್ತಿವೆ. ಇದು ಭಾರತದ ಪ್ರಜಾಭುತ್ವ ಮತ್ತು…

  • PSU Privatisation: ಸಾರ್ವಜನಿಕ ಉದ್ಯಮಗಳ ಮಾರಾಟ:

    ಕಳೆದ 9 ವರ್ಷಗಳಲ್ಲಿ ರೂ. 4.07 ಲಕ್ಷ ಕೋಟಿ ಬಂಡವಾಳ ಹಿಂತೆಗೆತ “ಪೂರ್ವಿಕರು ಕಷ್ಟಪಟ್ಟು ಕಟ್ಟಿ, ಬೆಳೆಸಿ, ಉಳಿಸಿಕೊಂಡು ಬಂದಿದ್ದ ಆಸ್ತಿಪಾಸ್ತಿಗಳನ್ನು ಮಾರಾಟ ಮಾಡಿ ಮನೆ ನಡೆಸುವ ಮಗನನ್ನು ಏನೆಂದು ಕರೆಯುತ್ತೇವೆ? ಮನೆಹಾಳ ಅಥವಾ ಕೇಡುಗ ಅನ್ನುತ್ತೇವೆ. ಹಾಗೇನೇ ಪೂರ್ವಿಕರು ಕಟ್ಟಿ, ಬೆಳೆಸಿ, ಉಳಿಸಿಕೊಂಡು ಬಂದಿದ್ದ ದೇಶದ ಸಂಪತ್ತನ್ನು ಮಾರಾಟ ಮಾಡುತ್ತಾ ‘ದೇಶವನ್ನು ನಡೆಸುವವ’ನನ್ನು ಏನೆನ್ನಬೇಕು? ಮಹಾನ್ ಮನೆ ಹಾಳ ಅಥವಾ ಮಹಾಕೇಡುಗ ಅನ್ನಬೇಕಾಗುತ್ತದೆ.” ದೇವನೂರು ಮಹಾದೇವ ಅವರ ಈ ಮಾತುಗಳನ್ನು ನೆನಪಿಸಿಕೊಳ್ಳುತ್ತ, ಮೋದಿ ಆಡಳಿತದಲ್ಲಿ ‘ಬಂಡವಾಳ…

  • ‘ಭಾರತ್ ರೈಸ್’ ಹೆಸರಿನಲ್ಲಿ ಅಕ್ಕಿ ಮಾರಾಟ: ಮುಚ್ಚಿಟ್ಟಅಜೆಂಡಾಗಳು

    ಒಂದೆಡೆ, ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಡಿತರ ಧಾನ್ಯಗಳ ಬದಲಿಗೆ ನೇರ ನಗದು ಯೋಜನೆ ಮೂಲಕ ಫಲಾನುಭವಿಗಳ ಖಾತೆಗೆ ಹಣ ಹಾಕುತ್ತಾರೆ. ಮತ್ತೊಂದೆಡೆ, ಆಹಾರ ಧಾನ್ಯಗಳ ಬೆಲೆ ಏರಿಕೆಯಿಂದ ಜನರನ್ನು ರಕ್ಷಿಸುವ ಉದ್ದೇಶದಿಂದ ಕಡಿಮೆ ದರದಲ್ಲಿ ಭಾರತ್ ರೈಸ್ ಹೆಸರಿನಲ್ಲಿ ಕೆಜಿ ಅಕ್ಕಿಗೆ 29 ರೂ.ನಂತೆ ಮಾರಾಟ  ಮಾಡಲಾಗುತ್ತಿದೆ ಎಂದು ಮೋದಿ ಸರ್ಕಾರ ಹೇಳುತ್ತಿದೆ. ಏನಿದು ನಾಟಕ? ಒಂದು ವೇಳೆ ಧಾನ್ಯಗಳ ಬೆಲೆ ಏರಿಕೆಯಿಂದ ಜನರನ್ನು ರಕ್ಷಣೆ ಮಾಡಬೇಕು ಎಂಬುದೇ ಅವರ ನಿಜವಾದ ಖಾಳಜಿಯಾಗಿದ್ದರೆ, ‘ಭಾರತ್ ಅಕ್ಕಿ’ ಹೆಸರಿನಲ್ಲಿ…

  • ‘ಅಮೃತ್ ಭಾರತ್ ಸ್ಟೇಷನ್ ಯೋಜನೆ’

    ಖಾಸಗಿಯವರ ತೆಕ್ಕೆಗೆ ರೈಲು ನಿಲ್ದಾಣಗಳು 2024ರ ಲೋಕಸಭಾ ಚುನಾವಣೆ ಘೊಷಣೆಯಾಗಲಿರುವ ಒಂದೆರಡು ವಾರಗಳ ಹಿಂದೆ, ಫೆಬ್ರವರಿ 26ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಬ್ಬರದ ಪ್ರಚಾರದೊಂದಿಗೆ ‘ಅಮೃತ್ ಭಾರತ್ ಸ್ಟೇಷನ್ ಯೋಜನೆ’ ಅಡಿಯಲ್ಲಿ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿರುವ 553 ರೈಲು ನಿಲ್ದಾಣಗಳ ಪುನರಾಭಿವೃದ್ದಿಗೆ ಚಾಲನೆ ನೀಡಿದ್ದಾರೆ. ಈ ಮೂಲಕ, ಒಕ್ಕೂಟ ಸರ್ಕಾರದ ಗುರಿಯಾದ ರೈಲ್ವೇ ವಲಯವನ್ನು ಖಾಸಗಿಯವರಿಗೆ ಒಪ್ಪಿಸುವ ‘ಖಾಸಗೀಕರಣ’ದ ಹಾದಿಯ ಗುರಿಯತ್ತ ಮತ್ತೊಂದು ಹೆಜ್ಜೆ ಇಟ್ಟಂತಾಗಿದೆ. ಮಾತ್ರವಲ್ಲ, ಆರ್ ಎಸ್ ಎಸ್…

Is this your new site? Log in to activate admin features and dismiss this message
ಲಾಗಿನ್