“ದೇಶದ ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣ 1950ರಿಂದ 2015ರ ನಡುವೆ ಶೇ.43ರಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಹಿಂದೂಗಳ ಪ್ರಮಾಣ ಶೇ. 7.8ರಷ್ಟು ಇಳಿಕೆಯಾಗಿದೆ. ಇದರಿಂದ ಮುಸ್ಲಿಮರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಮತ್ತು ಹಿಂದೂಗಳ ಜನಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿಯುತ್ತಿದೆ” ಎಂದು ಪ್ರಧಾನಿಯ ಆರ್ಥಿಕ ಸಲಹಾ ಸಮಿತಿಯ ಅಧಿಕಾರಿಗಳು ಸಿದ್ದಪಡಿಸಿರುವ ವರದಿ ಹೇಳಿದೆ. 2024ರ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆಯ ಮಧ್ಯೆ ಬಿಡುಗಡೆ ಮಾಡಿರುವ ಈ ವರದಿ ಬಹಳಷ್ಟು ಅಸತ್ಯಗಳಿಂದ ಕೂಡಿದೆ.
ಸಂಘಪರಿವಾರ ಮತ್ತು ನರೇಂದ್ರ ಮೋದಿಯವರು ಅವಕಾಶ ಸಿಕ್ಕಾಗಲೆಲ್ಲ ಮುಸ್ಲಿಮರ ವಿರುದ್ಧ ದ್ವೇಷ ಉಗುಳಲು ಹಿಂಜರಿಯುವುದಿಲ್ಲ. ಅದೂ ಸಹಾ, ಚುನಾವಣಾ ಸಮಯದಲ್ಲಿ ಇಸ್ಲಾಮೋಫೋಬಿಯಾ ಅವರ ಸ್ವಭಾವದಂತೆ ಮುಂಚೂಣಿಗೆ ಬಂದುಬಿಡುತ್ತದೆ. ಉಸಿರುಗಟ್ಟಿಸುವ ರೀತಿಯಲ್ಲಿ ಸುಳ್ಳುಗಳ ಕಟ್ಟುಗಳನ್ನು ಬಿಚ್ಚಿ ಹರಿಯಬಿಡುತ್ತಾರೆ. ಅವರು ಗೋಮಾಂಸ ತಿನ್ನುತ್ತಾರೆ, ವಿರೋಧ ಪಕ್ಷಗಳು ಹಿಂದೂಗಳ ಆಸ್ತಿ, ಹಣ, ಭೂಮಿ, ಬೆಳ್ಳಿ, ಚಿನ್ನವನ್ನು ಕಸಿದುಕೊಂಡು ಮುಸ್ಲಿಮರಿಗೆ ಕೊಡುತ್ತಾರೆ; ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಸಿದುಕೊಂಡು ಮುಸ್ಲಿಮರಿಗೆ ಕೊಡುತ್ತಾರೆ. ಇಂತಹ ಹಲವು ಸುಳ್ಳುಗಳನ್ನು ಹೇಳುತ್ತಲೇ ಇರುತ್ತಾರೆ. ಇದು ಮತ್ತಷ್ಟು ಮುಂದೆ ಹೋಗಿ, ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿ 2024ರ ಮೇ ನಲ್ಲಿ ‘ಅಧ್ಯಯನʼ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ‘ಇದೇ ರೀತಿ ಮುಂದುವರಿದರೆ ಜನಸಂಖ್ಯೆಯಲ್ಲಿ ಹಿಂದೂಗಳಿಗಿಂತ ಮುಸ್ಲಿಮರು ಹೆಚ್ಚಾಗುತ್ತಾರೆʼ ಎಂಬ ಸುಳ್ಳನ್ನು ಅದು ವರದಿಮಾಡಿದೆ. ಆ ಮೂಲಕ, ಸಂಘಪರಿವಾರ ಭಾರತದಲ್ಲಿ ಬಹಳ ದಿನಗಳಿಂದ ಹಬ್ಬಿಸುತ್ತಿದ್ದ ಸುಳ್ಳು ವದಂತಿಗಳ ಪ್ರಚಾರದಲ್ಲಿ ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯೂ ಕೈಜೋಡಿಸಿದೆ. ಆರ್ಥಿಕ ಸಲಹಾ ಸಮಿತಿ ಇಂತಹ ವದಂತಿಯನ್ನು ಚುನಾವಣೆಯ ಸಂದರ್ಭದಲ್ಲಿ ಹುಟ್ಟು ಹಾಕಿತು. ಚುನಾವಣಾ ಆಯೋಗವು ಈ ಅಸಹ್ಯಕರ ಪ್ರಯತ್ನಗಳನ್ನು ನೋಡಿಯೂ ಮೌನವಾಗಿತ್ತು.
ಇವರೆಲ್ಲರ ಬಾಯಲ್ಲೂ ಇರುವುದು ವಿಷವೆ
ಸಂಘಪರಿವಾರವು ಮುಸ್ಲಿಮರ ಬಗ್ಗೆ ಅನೇಕ ಅಪಪ್ರಚಾರಗಳನ್ನು ಮಾಡುತ್ತಲೇ ಇದೆ. “ಮುಸ್ಲಿಂ ಜನಸಂಖ್ಯೆಯ ಹೆಚ್ಚಳದ” ಬಗ್ಗೆ ವದಂತಿಗಳನ್ನು ಹಬ್ಬಿಸುತ್ತದೆ. ಸಂಘಪರಿವಾರಕ್ಕೆ ಅದು ಸುಳ್ಳು ಎಂದು ತಿಳಿದಿದೆ, ಆದರೂ ಅವರು ವದಂತಿ ಹಬ್ಬಿಸುತ್ತಾರೆ. ಗುಜರಾತ್ ಹಿಂಸಾಚಾರದಿಂದ ಸಂತ್ರಸ್ತರಾದ ಮತ್ತು ಪರಿಹಾರ ಶಿಬಿರಗಳಲ್ಲಿದ್ದ ಮುಸ್ಲಿಮರನ್ನು ಮೋದಿ ಅವರೇ “ಬೇಬಿ ಫ್ಯಾಕ್ಟರಿಗಳು” (ಮಕ್ಕಳನ್ನು ತಯ್ಯಾರಿಸುವ ಕಾರ್ಖಾನೆಗಳು) ಎಂದು ಉಲ್ಲೇಖಿಸಿದ್ದರು. “ನಾವಿಬ್ಬರು ಮತ್ತು ನಮಗಿಬ್ಬರು, ನಾವು ಐವರು ಮತ್ತು ನಮಗೆ ಇಪ್ಪತ್ತೈದು” ಎಂದು ಮೋದಿಯವರು ಮುಸ್ಲಿಮರ ಬಗ್ಗೆ ಮಾತನಾಡಿದ್ದರು. 2024ರಲ್ಲಿ ಒಮ್ಮೆ ರಾಜಸ್ಥಾನದಲ್ಲಿ ಮಾತನಾಡಿದ ಅವರು, “ಹಲವು ಮಕ್ಕಳನ್ನು ಹೊಂದಿರುವ ಜನರು” ಎಂದು ಉಲ್ಲೇಖಿಸಿದರು. ಜನಸಂಖ್ಯೆ ನಿಯಂತ್ರಣಕ್ಕೆ ನೀತಿ ರೂಪಿಸಬೇಕು ಎಂದು ನಿರ್ಮಲಾ ಸೀತಾರಾಮನ್ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹೇಳಿದ್ದಾರೆ. ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಅಸ್ಸಾಂನಲ್ಲಿ ಮುಸ್ಲಿಂ ಜನಸಂಖ್ಯೆಯು 35 ಪ್ರತಿಶತಕ್ಕೆ ಹೋಗುತ್ತಿದೆ; ಆದ್ದರಿಂದ ಅವರನ್ನು ಅಲ್ಪಸಂಖ್ಯಾತರೆಂದು ಕರೆಯಬಾರದು. ಅಲ್ಪಸಂಖ್ಯಾತರಿಗೆ ಇರುವ ಯಾವುದೇ ಸವಲತ್ತುಗಳನ್ನು ಕೊಡಬಾರದು ಎಂದು ಹೇಳಿದರು.
ಮುಸ್ಲಿಂ ಹೆಸರಿನಲ್ಲಿ ಒಂದು ತಿರುವು
ಕಳೆದ ವರ್ಷ ಫೆಬ್ರುವರಿ 14ರಂದು ಆರ್ಎಸ್ಎಸ್ನ ಆರ್ಗನೈಸರ್ ಪತ್ರಿಕೆ “ಮುಸ್ಲಿಂ ಜನಸಂಖ್ಯೆಯ ಬೆಳವಣಿಗೆ ಭಾರತಕ್ಕೆ ಏಕೆ ಆತಂಕಕಾರಿ” ಎಂಬ ತಲೆಬರಹದಲ್ಲಿ, ಸಲಾವುದ್ದೀನ್ ಸೋಗೈಬ್ ಚೌದ್ರಿ ಎಂಬ ಮುಸ್ಲಿಂ ಹೆಸರಿನಲ್ಲಿ ಲೇಖನವನ್ನು ಬರೆಯಲಾಗಿತ್ತು. ಅದರ ಪ್ರಕಾರ, ಭಾರತದ ಜನಸಂಖ್ಯೆಯು 2100 ರ ವೇಳೆಗೆ 200 ಕೋಟಿ ಆಗುತ್ತದೆ; ಆಗ ಮುಸ್ಲಿಮರು ಭಾರತದ ಜನಸಂಖ್ಯೆಯ ಶೇ. 30 ರಷ್ಟಾಗುತ್ತಾರೆ; ಅವರ ಸಂಖ್ಯೆ 90 ಕೋಟಿ ಆಗುತ್ತದೆ ಎಂದು ಬರೆದುಕೊಂಡಿದ್ದಾರೆ. ಯಾವ ಲೆಕ್ಕದಲ್ಲಿ ಎಂದು ಗೊತ್ತಿಲ್ಲ. ಜನಸಂಖ್ಯೆ 300 ಕೋಟಿಯಾದರೆ ಮಾತ್ರ, ಅದರ ಶೇ. 30 ಎಂಬುದು 90 ಕೋಟಿ ಆಗುತ್ತದೆ. ಆದರೆ, ಒಟ್ಟು ಜನಸಂಖ್ಯೆ 200 ಕೋಟಿಯಾದರೆ ಮುಸ್ಲಿಮರ ಜನಸಂಖ್ಯೆ ಶೇ. 30 ರಷ್ಟಾಗುತ್ತದೆ ಮತ್ತು 90 ಕೋಟಿ ಆಗುತ್ತಾರೆ ಎಂಬುದು ಯಾವುದೇ ಲೆಕ್ಕದಲ್ಲಿ ಸಾಧ್ಯವಿಲ್ಲ. ಮುಸ್ಲಿಮರಲ್ಲಿ ಗಮನಾರ್ಹ ಪ್ರಮಾಣವು ಉಗ್ರಗಾಮಿಗಳು ಮತ್ತು ಜಿಹಾದಿಗಳು ಎಂದು ಆ ಲೇಖನವು ಹೇಳುತ್ತದೆ. ಅಂದರೆ ಪವಿತ್ರ ಯುದ್ಧದ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಮುಸ್ಲಿಮರು ತಮ್ಮ ವಾರ್ಷಿಕ ಉಳಿತಾಯದ 2.5 ಪ್ರತಿಶತವನ್ನು ‘ಝಕಾತ್’ ಆಗಿ ಪಾವತಿಸುತ್ತಾರೆ. “ಆ ಹಣವನ್ನು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಮಾಧ್ಯಮಗಳಿಗೆ ನೀಡುತ್ತಾರೆ; ಇದರಿಂದಾಗಿ ಅವರ ಬಗ್ಗೆ ಮಾಧ್ಯಮಗಳು ಉಸಿರುಬಿಡುತ್ತಿಲ್ಲ.” ಹೀಗೆ ಅವರ ಹಲವಾರು ದ್ವೇಷದ ಬರಹಗಳನ್ನು ನಾವು ಪಟ್ಟಿ ಮಾಡಬಹುದು. ಆದರೆ, ಇವು ಸಂಪೂರ್ಣ ಸುಳ್ಳು ಅಥವಾ ಅಲ್ಪ ಸತ್ಯದೊಂದಿಗೆ ಮಿಶ್ರಿತ ಸುಳ್ಳುಗಳಾಗಿವೆ.
ಶುದ್ದ ಸುಳ್ಳು
ಪ್ರಧಾನಿಯವರ ಆರ್ಥಿಕ ಸಲಹಾ ಸಮಿತಿಯ ವರದಿಯಂತೆ, “ಭಾರತದಲ್ಲಿ ಮುಸ್ಲಿಮರು ಕುಟುಂಬ ಯೋಜನೆಯನ್ನು ಅನುಸರಿಸುವುದಿಲ್ಲ. ಆದ್ದರಿಂದ ಅವರ ಜನಸಂಖ್ಯೆಯು 65 ವರ್ಷಗಳಲ್ಲಿ ಭಾರತದ ಜನಸಂಖ್ಯೆಯ 9.84 ಪ್ರತಿಶತದಿಂದ 14.09 ಪ್ರತಿಶತಕ್ಕೆ ಏರಿದೆ. ಇದಕ್ಕೆ ವ್ಯತಿರಿಕ್ತವಾಗಿ, ಅದೇ ಅವಧಿಯಲ್ಲಿ ಹಿಂದೂ ಜನಸಂಖ್ಯೆಯು 84.68 ಪ್ರತಿಶತದಿಂದ 78.06 ಪ್ರತಿಶತಕ್ಕೆ ಕುಸಿದಿದೆ. ಕಾರಣ ಮುಸ್ಲಿಮರು ಎಷ್ಟು ಮಕ್ಕಳನ್ನು ಬೇಕಾದರೂ ಹೊಂದಬಹುದು. ಕುಟುಂಬ ಯೋಜನೆ ಕಾನೂನುಗಳು ಅವರಿಗೆ ಅನ್ವಯಿಸುವುದಿಲ್ಲ. ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸರ್ಕಾರದ ನೆರವು ನೀಡಬಾರದು. ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು” ಎಂದು ಹೇಳಲಾರಂಭಿಸಿದ್ದಾರೆ.
ಸತ್ಯ ಏನು?
ಈ ಅನುಪಾತವು ನಿಜವಾಗಿ ಹೇಗಿರುತ್ತದೆ? ಮಕ್ಕಳನ್ನು ಹೊಂದುವ ದರವನ್ನು ಒಟ್ಟು ಫಲವತ್ತತೆ ದರ ಎಂದು ಕರೆಯಲಾಗುತ್ತದೆ. ಭಾರತಕ್ಕೆ ಇದು ರಾಜ್ಯದಿಂದ ರಾಜ್ಯಕ್ಕೆ ಮತ್ತು ಜಿಲ್ಲೆಯಿಂದ ಜಿಲ್ಲೆಗೆ ಬದಲಾಗುತ್ತದೆ. ಉದಾಹರಣೆಗೆ, ದಿ ಹಿಂದೂ ಇಂಗ್ಲಿಷ್ ನಿಯತಕಾಲಿಕದ ಏಪ್ರಿಲ್ 23, 2022 ರ ಸಂಚಿಕೆಯಲ್ಲಿ ವಿಘ್ನೇಶ್ ರಾಧಾಕೃಷ್ಣನ್ ಮತ್ತು ರೆಬೆಕಾ ರೋಸ್ ವರ್ಗೀಸ್ ಅವರು ಮೂರು ಪಟ್ಟಿಗಳನ್ನು ಸಂಗ್ರಹಿಸಿದ್ದಾರೆ. ಆ ಮೂರು ಪಟ್ಟಿಗಳು ರಾಷ್ಟ್ರೀಯ ಮಾದರಿ ಕುಟುಂಬ ಸಮೀಕ್ಷೆಯನ್ನು ಆಧರಿಸಿವೆ ಎಂದು ಅವರು ಹೇಳಿದ್ದಾರೆ. ಇದು 1998-99 ರಿಂದ 2019-2021 ರ ಅವಧಿಗೆ ಹಿಂದೂ ಮಹಿಳೆ ಮತ್ತು ಮುಸ್ಲಿಂ ಮಹಿಳೆಯ ಜನನ ಪ್ರಮಾಣವನ್ನು ಪಟ್ಟಿಮಾಡುತ್ತದೆ. ಮುಸ್ಲಿಂ ಮಹಿಳೆಯರ ಫಲವತ್ತತೆ ದರಗಳು ಎಲ್ಲೆಡೆ ಹೆಚ್ಚಿವೆ. ಇದರಲ್ಲಿ ಎರಡು ಮಾತಿಲ್ಲ. ಆದರೆ, ಆ ಅಂತರವು 1998-99 ರಲ್ಲಿ 0.81 ರಿಂದ 2019-21 ರಲ್ಲಿ 0.42 ಕ್ಕೆ ಕಡಿಮೆಯಾಗಿದೆ. ಅಂದರೆ, ಹಿಂದೂ ಮಹಿಳೆಯರು 1999ರಲ್ಲಿ ಸರಾಸರಿ 2.78 ಮಕ್ಕಳನ್ನು ಹೊಂದಿದ್ದರೆ, 2021ರಲ್ಲಿ ಅದು 1.94ಕ್ಕೆ ಇಳಿದಿದೆ. ಅಂದರೆ, 0.84 ರಷ್ಟು ಕಡಿಮೆ. ಮುಸ್ಲಿಂ ಮಹಿಳೆಯರು 1999ರಲ್ಲಿ ಸರಾಸರಿ 3.59 ಮಕ್ಕಳನ್ನು ಹೊಂದಿದ್ದರು. 2021ರಲ್ಲಿ 2.36ಕ್ಕೆ ಇಳಿಕೆಯಾಗಿದೆ. ಅಂದರೆ ಮುಸ್ಲಿಂ ಮಹಿಳೆಯರ ಫಲವತ್ತತೆ ಪ್ರಮಾಣ 1.23ಕ್ಕೆ ಇಳಿದಿದೆ. ಆದರೆ, ಇದರಲ್ಲಿ ಮೂರನೇ ಎರಡರಷ್ಟು ಹಿಂದೂ ಮಹಿಳೆಯರ ಫಲವತ್ತತೆ ಪ್ರಮಾಣ ಕುಸಿದಿದೆ. ಇದು ಸತ್ಯ ಸಂಗತಿ. ಇದರ ಕಾರಣವನ್ನು ನಂತರ ನೋಡಬಹುದು.
ದೇಶದಾದ್ಯಂತ ಒಂದೇ ದರವಿಲ್ಲ
ಅದೇ ರೀತಿ, ಅದೇ ರೀತಿ ಭಾರತದಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಭಾರತದ ಯಾವುದೇ ಪ್ರದೇಶಕ್ಕೆ ಹೋಲಿಸಿದರೆ ಮುಸ್ಲಿಂ ಮಹಿಳೆಯರ ಫಲವತ್ತತೆ ಪ್ರಮಾಣ ಹೆಚ್ಚಿಲ್ಲ. ಉದಾಹರಣೆಗೆ, 2005-06ರಲ್ಲಿ ಉತ್ತರ ಪ್ರದೇಶದಲ್ಲಿ ಹಿಂದೂ ಮಹಿಳೆಯರ ಫಲವತ್ತತೆ ಪ್ರಮಾಣ 3.73 ಇತ್ತು. ಬಿಹಾರದಲ್ಲಿ 3.86. ಆದರೆ, ಮಹಾರಾಷ್ಟ್ರದಲ್ಲಿ ಮುಸ್ಲಿಂ ಮಹಿಳೆಯರ ಫಲವತ್ತತೆ ಪ್ರಮಾಣ 2.85. ಪಶ್ಚಿಮ ಬಂಗಾಳದಲ್ಲಿ ಇದು 3.15 ಆಗಿದೆ. ಮಧ್ಯಪ್ರದೇಶದಲ್ಲಿ ಇದು 3.06 ಆಗಿದೆ. ಪ್ರತಿ ಆಯಾ ರಾಜ್ಯದಲ್ಲಿ ಮುಸ್ಲಿಂ ಮಹಿಳೆಯರ ಫಲವತ್ತತೆ ದರ ಹಿಂದೂ ಮಹಿಳೆಯರಿಗಿಂತ ಹೆಚ್ಚಿದ್ದರೂ, ನಾವು ಇದನ್ನು ರಾಜ್ಯಗಳಾದ್ಯಂತ ಹೋಲಿಸಿದರೆ, ಮೇಲೆ ಹೇಳಿದಂತೆ, ಮುಸ್ಲಿಂ ಮಹಿಳೆಯರ ಹೆರಿಗೆಯ ಪ್ರಮಾಣವು ಒಂದು ರಾಜ್ಯಕ್ಕಿಂತ 3 ರಾಜ್ಯಗಳಲ್ಲಿ ಕಡಿಮೆಯಾಗಿದೆ.
ಅದೇ ಸಮೀಕ್ಷೆಯನ್ನು 15 ವರ್ಷಗಳ ನಂತರ 2019-21 ರಲ್ಲಿ ತೆಗೆದುಕೊಂಡಾಗ, ಉತ್ತರ ಪ್ರದೇಶದಲ್ಲಿ ಹಿಂದೂ ಮಹಿಳೆಯರ ಫಲವತ್ತತೆಯ ಪ್ರಮಾಣವು 2.29 ಕ್ಕೆ ಮತ್ತು ಬಿಹಾರದಲ್ಲಿ 2.88 ಕ್ಕೆ ಇಳಿದಿದೆ. ಆದಾಗ್ಯೂ, ಉತ್ತರ ಪ್ರದೇಶದ ಮುಸ್ಲಿಂ ಮಹಿಳೆಯರ ಫಲವತ್ತತೆ ದರ 2.66 ಕ್ಕಿಂತ ಬಿಹಾರದ ಪ್ರಮಾಣ ಹೆಚ್ಚಾಗಿದೆ. ಮಹಾರಾಷ್ಟ್ರ ಮುಸ್ಲಿಂ ಮಹಿಳೆಯರ 2.06, ಪಶ್ಚಿಮ ಬಂಗಾಳದ ಮುಸ್ಲಿಂ ಮಹಿಳೆಯರ 2.03 ಮತ್ತು ಮಧ್ಯಪ್ರದೇಶದ 2.4 ಕ್ಕಿಂತ ಹೆಚ್ಚಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರ ಫಲವತ್ತತೆ ಪ್ರಮಾಣವು ಉತ್ತರ ಪ್ರದೇಶದ ಹಿಂದೂ ಮಹಿಳೆಯರಿಗಿಂತ ಕಡಿಮೆಯಾಗಿದೆ. ಬಿಹಾರವು 2.88 ರ ಹಿಂದೂ ಸ್ತ್ರೀ ಫಲವತ್ತತೆಯ ಪ್ರಮಾಣವನ್ನು ಹೊಂದಿದೆ ಮತ್ತು ಉತ್ತರ ಪ್ರದೇಶವು ಮೇಲಿನ 3 ರಾಜ್ಯಗಳಲ್ಲಿ ಅತ್ಯಂತ ಕಡಿಮೆ ಮುಸ್ಲಿಂ ಸ್ತ್ರೀ ಫಲವತ್ತತೆಯ ಪ್ರಮಾಣವನ್ನು ಹೊಂದಿದೆ. ಉತ್ತರ ಪ್ರದೇಶಕ್ಕೆ ಹೋಲಿಸಿದರೆ, ಈ 15 ವರ್ಷಗಳಲ್ಲಿ ಹಿಂದೂ ಮಹಿಳೆಯರ ಸಂತಾನೋತ್ಪತ್ತಿ ಪ್ರಮಾಣವು 1.44 ರಷ್ಟು ಕಡಿಮೆಯಾಗಿದೆ, ಆದರೆ ಮುಸ್ಲಿಂ ಮಹಿಳೆಯರ ಪ್ರಮಾಣವು 1.67 ರಷ್ಟು ಕಡಿಮೆಯಾಗಿದೆ.
ಅತ್ಯಂತ ವೇಗದ ಪತನ
ಕಳೆದ 15 ವರ್ಷಗಳಿಂದ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರ ಫಲವತ್ತತೆ ಪ್ರಮಾಣವು ಹಿಂದೂ ಮಹಿಳೆಯರಿಗಿಂತ 0.6 ಪಟ್ಟು ಹೆಚ್ಚಾಗಿದೆ. ಆದರೆ 15 ವರ್ಷಗಳ ನಂತರ 0.37ಕ್ಕೆ ಇಳಿದಿದೆ. ಹೀಗೆ ಎಲ್ಲ ರಾಜ್ಯಗಳನ್ನು ತುಲನೆ ಮಾಡಿದರೆ ಮುಸಲ್ಮಾನರ ಜನನ ಪ್ರಮಾಣ ಬಹುಬೇಗ ಇಳಿಮುಖವಾಗಿರುವುದನ್ನು ಕಾಣಬಹುದು.
ಬಹುಪತ್ನಿತ್ವ: ಮುಸ್ಲೀಮರಲ್ಲಿ ಮಾತ್ರ ಇದೆಯೇ?
ಅದೇ ರೀತಿ “ಮುಸ್ಲಿಮರು ಎಷ್ಟು ಹೆಣ್ಣನ್ನು ಬೇಕಾದರೂ ಮದುವೆಯಾಗಬಹುದು. ಹಿಂದೂಗಳಿಗೆ ಆ ಅವಕಾಶವಿಲ್ಲ. ‘ಇದೊಂದು ಅನ್ಯಾಯ” ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಭಾರತದಲ್ಲಿ ಶೇಕಡಾ 1.9ರಷ್ಟು ಮುಸ್ಲಿಮರು ಬಹುಪತ್ನಿತ್ವವನ್ನು ಆಚರಿಸುತ್ತಾರೆ. ಕ್ರಿಶ್ಚಿಯನ್ನರಲ್ಲಿ ಇದು 2.1 ಪ್ರತಿಶತ. ಸಿಖ್ಖರಲ್ಲಿ 0.5. ಬೌದ್ಧರಲ್ಲಿ 1.3. ಇತರ ಧರ್ಮಗಳಲ್ಲಿ2.5. ಹಿಂದೂಗಳಲ್ಲಿ 1.3. ಆದಾಗ್ಯೂ, ಹಿಂದೂ ಧರ್ಮದಲ್ಲಿಯೂ ಸಹ ಬಹುಪತ್ನಿತ್ವದಲ್ಲಿ ಅಸಮಾನತೆ ಇದೆ. ಆದಿವಾಸಿಗಳಿಗೆ ಶೇ.2.4, ಪರಿಶಿಷ್ಟ ಜಾತಿಯವರಿಗೆ ಶೇ.1.5, ಒಬಿಸಿಗಳಿಗೆ ಶೇ.1.3 ಮತ್ತು ಇತರರಿಗೆ ಶೇ.1.2ರಷ್ಟು ಇರುವುದನ್ನು ನೋಡಬಹುದು.
ಸಾಕ್ಷರತೆ ಮತ್ತು ಆದಾಯವು ಪ್ರಮುಖ ಅಂಶಗಳಾಗಿವೆ
ಅದೇ ರೀತಿ, ಇಡೀ ಭಾರತಕ್ಕೆ ಆರ್ಥಿಕ ಆಧಾರದ ಮೇಲೆ, ಬಹುಪತ್ನಿತ್ವವು ಅನಕ್ಷರಸ್ಥರಲ್ಲಿ 2.4 ಪ್ರತಿಶತ, ಪ್ರಾಥಮಿಕ ಶಿಕ್ಷಣ ಹೊಂದಿರುವವರಲ್ಲಿ 2.1 ಪ್ರತಿಶತ, ಪ್ರೌಢ ಶಿಕ್ಷಣ ಹೊಂದಿರುವವರಲ್ಲಿ 0.9 ಪ್ರತಿಶತ ಮತ್ತು ಉನ್ನತ ಶಿಕ್ಷಣ ಹೊಂದಿರುವವರಲ್ಲಿ 0.3 ಪ್ರತಿಶತ ಇದೆ. ಅದೇರೀತಿ, ಫಲವತ್ತತೆಯು ಬಹುಪತ್ನಿತ್ವದ ಮೇಲೆ ಪ್ರಭಾವ ಬೀರುತ್ತದೆ. ಕಡು ಬಡವರಲ್ಲಿ ಶೇಕಡಾ 2.4, ಬಡವರಲ್ಲಿ ಶೇಕಡಾ 1.8, ಮಧ್ಯಮ ವರ್ಗದವರಲ್ಲಿ ಶೇಕಡಾ 1.5, ಶ್ರೀಮಂತರಲ್ಲಿ ಶೇಕಡಾ 0.9 ಮತ್ತು ಅತಿ ಶ್ರೀಮಂತರಲ್ಲಿ ಶೇಕಡಾ 0.5. ಬಹುಪತ್ನಿತ್ವ ಹೆಚ್ಚಾಗಲು ಬಡತನ ಮತ್ತು ಅನಕ್ಷರತೆ ಕಾರಣ ಎಂಬುದನ್ನು ಕಾಣಬಹುದು. ನಾವು ಈ ಸಾರ್ವತ್ರಿಕ ವೈಶಿಷ್ಟ್ಯವನ್ನು ಮುಸ್ಲಿಮರಿಗೆ ಅನ್ವಯಿಸಿದರೆ, ಅವರ ಶೈಕ್ಷಣಿಕ ಹಿಂದುಳಿದಿರುವಿಕೆ ಮತ್ತು ಆರ್ಥಿಕ ಹಿಂದುಳಿದಿರುವಿಕೆಯು ಮಕ್ಕಳನ್ನು ಹೊಂದುವ ಮತ್ತು ಬಹುಪತ್ನಿತ್ವವನ್ನು ಅನುಸರಿಸುವವರ ಮೇಲೆ ಪ್ರಭಾವ ಬೀರುವುದನ್ನು ನಾವು ನೋಡಬಹುದು.
2005-06 ರ ಜನಗಣತಿಯ ಪ್ರಕಾರ, ಹಿಂದೂಗಳಲ್ಲಿ 40.5 ಪ್ರತಿಶತ ಮಹಿಳೆಯರು ಅನಕ್ಷರಸ್ಥರಾಗಿದ್ದರೆ, ಮುಸ್ಲಿಮರಲ್ಲಿ 47.9 ಮಹಿಳೆಯರು ಅನಕ್ಷರಸ್ಥರಿದ್ದರು. 2019-2021ರಲ್ಲಿ ಇದು ಹಿಂದೂ ಮಹಿಳೆಯರಲ್ಲಿ 28.5 ಮತ್ತು ಮುಸ್ಲಿಂ ಮಹಿಳೆಯರಲ್ಲಿ 29.1 ಆಗಿದೆ. ಕಳೆದ 15 ವರ್ಷಗಳಲ್ಲಿ ಕನಿಷ್ಠ ಶಿಕ್ಷಣ ಹೊಂದಿರುವವರು 52.1 ಪ್ರತಿಶತದಿಂದ 70.9 ಪ್ರತಿಶತಕ್ಕೆ ಏರಿದ್ದಾರೆ ಎಂದು ನಾವು ಪರಿಗಣಿಸಿದಾಗ ಮುಸ್ಲಿಂ ಮಹಿಳೆಯರ ಹೆರಿಗೆಯ ದರದಲ್ಲಿನ ಕುಸಿತವನ್ನು ನಾವು ಅರ್ಥಮಾಡಿಕೊಳ್ಳಬಹುದು. ಅದೇ ರೀತಿ, ಮುಸ್ಲಿಮರು, ಹಿಂದೂಗಳು ಮತ್ತು ಇತರ ಧರ್ಮಗಳಲ್ಲಿ ಮಕ್ಕಳ ಹೆರಿಗೆಯ ಪ್ರಮಾಣವು ಅಧಿಕವಾಗಿದೆ – ಶಿಕ್ಷಣ, ಆದಾಯ ಮತ್ತು ಈ ಮಟ್ಟಗಳು ಸುಧಾರಿಸಿದಂತೆ ಇಳಿಮುಖವಾಗಿದೆ ಎಂದು ದೊಡ್ಡ ಪ್ರಮಾಣದ ಡೇಟಾ ತೋರಿಸುತ್ತದೆ.
ಮೋದಿ ಸರ್ಕಾರ ಅವಕಾಶಗಳನ್ನು ಕಡಿತಗೊಳಿಸಿದೆ
ಈ ಕಾರಣಕ್ಕಾಗಿಯೇ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಸರ್ಕಾರವು ಸಾಚಾರ್ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮುಸ್ಲಿಮರಿಗೆ ಶೈಕ್ಷಣಿಕ ಸಹಾಯವನ್ನು ಘೋಷಿಸಿತು ಮತ್ತು ಜಾರಿಗೊಳಿಸಿತು. ಅದಕ್ಕೂ ಮೊದಲು ಸಹಾ ಕೆಲವು ವಿದ್ಯಾರ್ಥಿ ವೇತನಗಳಿದ್ದವು. ಆದರೆ, ಈ ಅವಧಿಯಲ್ಲಿ ಮೋದಿ ಸರ್ಕಾರವು ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ, ಅಲ್ಪಸಂಖ್ಯಾತ ಬಾಲಕಿಯರಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಬೇಗಂ ಹಜರತ್ ಮಹಲ್ ವಿದ್ಯಾರ್ಥಿವೇತನ, ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಮೌಲಾನಾ ಅಬ್ದುಲ್ ಕಲಾಂ ಆಜಾದ್ ರಾಷ್ಟ್ರೀಯ ಫೆಲೋಶಿಪ್ ಮತ್ತು ಸಾಗರೋತ್ತರ ವಿದ್ಯಾರ್ಥಿಗಳಿಗೆ ಸಾಲದ ಮೇಲಿನ ಬಡ್ಡಿ ಸಬ್ಸಿಡಿಯನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಒಂದೆಡೆ ಮುಸ್ಲಿಮರನ್ನು ಶತ್ರುಗಳಂತೆ ಬಿಂಬಿಸುವುದು, ಹಿಂದುಳಿದ ಅವರ ಜನನ ಪ್ರಮಾಣವನ್ನು ಉಲ್ಲೇಖಿಸುವುದು, ಮತ್ತೊಂದೆಡೆ ಅವರ ಶಿಕ್ಷಣವನ್ನು ಸುಧಾರಿಸುವ ಕಾರ್ಯಕ್ರಮಗಳನ್ನು ದುರ್ಬಲಗೊಳಿಸುವುದು ಸಂಘಪರಿವಾರದ ಉದ್ದೇಶಪೂರ್ವಕ ಕುತಂತ್ರವಾಗಿದೆ. ಇದು ಕೇವಲ ಮುಸ್ಲಿಮರು ಮಾತ್ರ ಎದುರಿಸಬೇಕಾದ ಸಮಸ್ಯೆಯಲ್ಲ; ಪ್ರತಿಯೊಬ್ಬ ಭಾರತೀಯನ ವಿರುದ್ಧದ ವಿಷಪೂರಿತ ಪ್ರಚಾರ.
ನಿಮ್ಮ ಟಿಪ್ಪಣಿ ಬರೆಯಿರಿ