ಟ್ಯಾಗ್: ಮೂಢನಂಬಿಕೆ
-
ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ:
“ಮಾಸ್ಟರ್ ಮೈಂಡ್” ಆರೋಪಿಗಳನ್ನು ಖುಲಾಸೆಗೊಳಿಸಿದ್ದರ ವಿರುದ್ಧ ಸಿಬಿಐ ಮೇಲ್ಮನವಿ ಸಲ್ಲಿಸಿಲ್ಲ!! ವಿಚಾರವಾದಿ ಡಾ. ನರೇಂದ್ರ ದಾಭೋಲ್ಕರ್ ಅವರ ಹತ್ಯೆಯಾಗಿ ಆಗಸ್ಟ್ 20ಕ್ಕೆ 12 ವರ್ಷಗಳು ಕಳೆದಿವೆ. ದಾಭೋಲ್ಕರ್ ಹತ್ಯೆ ನಡೆದ ಹತ್ತು ವರ್ಷ ಎಂಟು ತಿಂಗಳ ನಂತರ (ಮೇ 10, 2024 ರಂದು) ಪುಣೆಯ ವಿಶೇಷ ನ್ಯಾಯಾಲಯವು ಇಬ್ಬರು ಹಿಂದುತ್ವವಾದಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ, ನ್ಯಾಯಾಲಯವು “ಮಾಸ್ಟರ್ ಮೈಂಡ್” ಡಾ ವೀರೇಂದ್ರಸಿನ್ಹ್ ಶರದ್ಚಂದ್ರ ತಾವಡೆ, ವಕೀಲ ಸಂಜೀವ್ ಗಜಾನನ್ ಪುನಾಲೇಕರ್ ಮತ್ತು ಸನಾತನ…
-
ಹತ್ರಾಸ್: ಕಾಲ್ತುಳಿತದಿಂದ 121 ಜನರ ಬಲಿ: ಮೂಢನಂಬಿಕೆಗೆ ಕೊನೆಯೇ ಇಲ್ಲವೇ?
ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸತ್ಸಂಗ ಸಭೆಯಲ್ಲಿ ಕಾಲ್ತುಳಿತಕ್ಕೆ ಸಿಲುಕಿ 121 ಅಮಾಯಕರ ಜೀವಗಳು ಬಹಳ ಸುಲಭವಾಗಿ ಬಲಿಯಾದವು. ಏನಿದು ವಿಕೃತಿ! ಮೂಢನಂಬಿಕೆಗೆಕೊನೆಯೇ ಇಲ್ಲವೇ? ಪಾದದ ದೂಳಿನಿಂದ ಭಕ್ತರ ಸಕಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ವ್ಯಾಪಕ ಪ್ರಚಾರ ಮಾಡಿದ ಸ್ವಯಂ ಘೋಷಿತ ದೇವದೂತ ಬೋಲೆ ಬಾಬಾ ಈ ಘೋರಘಟನೆಯ ಕೇಂದ್ರಬಿಂದು. ಲಕ್ಷಾಂತರ ಜನರು ಸೇರುವ ಸಂದರ್ಭಗಳಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದ ಸ್ಥಳೀಯ ಆಡಳಿತದ ನಿಷ್ಕ್ರಿಯತೆ, ಬಾಬಾ ನೊಡನೆ ಇರುವ ರಾಜಕಾರಣಿಗಳ ನಂಟು,…