ಟ್ಯಾಗ್: Enumeration Form
-
ವಲಸೆ ಕಾರ್ಮಿಕರ ಮತದಾನದ ಹಕ್ಕುಗಳನ್ನು ಕಸಿದುಕೊಳ್ಳಲಿರುವ ಎಸ್ಐಆರ್
ಕರ್ನಾಟಕದಲ್ಲಿ ಎಸ್ಐಆರ್ (Special Intensive Revision) ಪ್ರಕ್ರಿಯೆ ಜೂನ್ 30ರಂದು ಆರಂಭವಾಗಿದೆ. ಅಂದಿನಿಂದಲೇ ಗಣತಿ ಫಾರಂ ಅನ್ನು ಮನೆಮನೆಗೆ ತಲುಪಿಸುವ ಹೊಣೆಯನ್ನು ಬಿಎಲ್ಒ ಗಳಿಗೆ ವಹಿಸಲಾಗಿದೆ. ಮತದಾರರು ತಮ್ಮ ಗಣತಿ ಫಾರಂ ಪಡೆದು, ಅದನ್ನು ಭರ್ತಿ ಮಾಡಿ, ಆಗಸ್ಟ್ 8ರ ಒಳಗೆ ಬಿಎಲ್ಒ ಗಳಿಗೆ ತಲುಪಿಸಬೇಕು. ಈ ಮೊದಲು ಜುಲೈ 29ರ ವರೆಗೆ ಸಮಯಾವಕಾಶ ಇತ್ತು. ಅದನ್ನು ವಿಸ್ತರಣೆ ಮಾಡಿ ಜುಲೈ 15ರಂದು ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ. ಆಗಸ್ಟ್ 8ರಂದು ಕರಡು ಮತದಾರರ ಪಟ್ಟಿ ಪ್ರಕಟಣೆ…